Webdunia - Bharat's app for daily news and videos

Install App

ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ: ಅಮಿತ್ ಶಾಗೆ ಮುಖಭಂಗ

Webdunia
ಬುಧವಾರ, 9 ಆಗಸ್ಟ್ 2017 (07:56 IST)
ನಿನ್ನೆ ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಗೆಲುವು ಸಾಧಿಸಿದ್ದಾರೆ. 44 ಮತಗಳನ್ನ ಪಡೆದ ಅಹ್ಮದ್ ಪಟೇಲ್ ಪ್ರತಿಸ್ಪರ್ಧಿ ಬಿಜೆಪಿಯ ಬಲವಂತಸಿಂಗ್ ರಜಪೂತ್ ಅವರನ್ನ ಮಣಿಸಿದ್ದಾರೆ.  ನಿರೀಕ್ಷೆಯಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಯ ಗಳಿಸಿದ್ದಾರೆ.

ಆದರೆ, ಶತಾಯಗತಾಯ ಅಹ್ಮದ್ ಪಟೇಲ್ ಅವರನ್ನ ಮಣಿಸಬೇಕೆಂದು ಪಣತೊಟ್ಟಿದ್ದ ಬಿಜೆಪಿ ರಾಷ್ಟ್ರೀಯ  ಅಧ್ಯಕ್ಷ ಅಮಿತ್ ಶಾಗೆ ತೀವ್ರ ಮುಖಭಂಗವಾಗಿದೆ.  ಇಬ್ಬರು ಶಾಸಕರು ಬಿಜೆಪಿ ಬೂತ್ ಏಜೆಂಟ್`ಗೆ ತೋರಿಸಿ ಮತದಾನ ಮಾಡಿದ್ದರಿಂದ ಎರಡು ಮತಗಳನ್ನ ಅಮಾನತು ಮಾಡಲಾಯ್ತು. ಹೀಗಾಗಿ, 44 ಮತೆಗಳನ್ನ ಪಡೆದ ಅಹ್ಮದ್ ಪಟೇಲ್ ಗೆಲುವಿನ ಪತಾಕೆ ಹಾರಿಸಿದರು. ಬಿಜೆಪಿಯ ಬಲವಂತ ಸಿಂಗ್ ಕೇವಲ 38 ಮತಗಳನ್ನ ಪಡೆದರು.
ಗೆಲುವಿನ ಬಳಿಕ ಟ್ವಿಟ್ ಮಾಡಿರುವ ಅಹ್ಮದ್ ಪಟೇಲ್ ಸತ್ಯಮೇವಜಯtE. ಹಣ ಮತ್ತು ತೋಳುಬಲ ಬಳಸಿಕೊಂಡು ದೇಶದ ಆಡಳಿತ ಯಂತ್ರವನ್ನ ದುರ್ಬಳಕೆ ಮಾಡಿಕೊಂಡವರ ಸೋಲು ಎಂದು ಹೇಳಿದ್ದಾರೆ.

ರಾಜಸಭಾ ಚುನಾವಣೆ ಮಧ್ಯಾಹ್ನವೇ ಮುಗಿದರೂ ಇಬ್ಬರು ಕಾಂಗ್ರೆಸ್`ನ ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ತಮಧ್ಯರಾತ್ರಿವರೆಗೆ ರಾಜಕೀಯ ಪ್ರಹಸನ ಮುಂದುವರೆದಿತ್ತು. ಬಿಜೆಪಿ ಬೂತ್ ಏಜೆಂಟರ್`ಗೆ ತೋರಿಸಿ ಇಬ್ಬರು ಶಾಸಕರು ಮತದಾನ ಮಾಡಿದ್ದಾರೆ. ವಿಡಿಯೋ ಪರಿಶೀಲಿಸಿ ಅವರ ಮತಗಳನ್ನ ಅಮಾನತು ಮಾಡಬೇಕೆಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಮತ ಎಣಿಕೆ ಮುಂದೂಡಲಾಗಿ, ಹಗ್ಗಜಗ್ಗಾಟದ ಬಳಿಕ ಮಧ್ಯರಾತ್ರಿ ಚುನಾವಣಾ ಆಯೋಗ ಎರಡು ಮತಗಳನ್ನ ಅಮಾನತು ಮಾಡಿತು. ಬಳಿಕ ನಡೆದ ಮತ ಎಣಿಕೆ ವೇಳೆ ಅಹ್ಮದ್ ಪಟೇಲ್ ಜಯಭೇರಿ ಬಾರಿಸಿದರು. ಈ ಫಲಿತಾಂಶದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

AirIndia Crash: ಭಾರತದಲ್ಲಿ ಇದು ಕೊನೆಯ ರಾತ್ರಿ: ಲಂಡನ್ ಮೂಲದ ಜೇಮೀ ಮೀಕ್ ಭಾವುಕ ಪೋಸ್ಟ್‌

Air India Mishap: ಕೊನೆ ಕ್ಷಣದಲ್ಲಿ ಫೈಲಟ್ ಆ ಪದ ಬಳಸಬೇಕೆಂದರೆ ಎಂಥ ಕಠಿಣ ಪರಿಸ್ಥಿತಿ ಇತ್ತು ಗೊತ್ತಾ

Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

ಮುಂದಿನ ಸುದ್ದಿ
Show comments