Select Your Language

Notifications

webdunia
webdunia
webdunia
webdunia

ಸೋನಿಯಾ ವಿದೇಶಿ ಮೂಲವನ್ನು ಮತ್ತೆ ಕೆದಕಿದ ಕೇಂದ್ರ ಸಚಿವ

ಸೋನಿಯಾ ವಿದೇಶಿ ಮೂಲವನ್ನು ಮತ್ತೆ ಕೆದಕಿದ ಕೇಂದ್ರ ಸಚಿವ
ನವದೆಹಲಿ , ಬುಧವಾರ, 27 ಮೇ 2015 (17:51 IST)
ಇದು ಭಾರತ ದೇಶವೇ ಹೊರತು ಇಟಲಿಯಲ್ಲ.ಪ್ರತಿಯೊಬ್ಬ ರೈತನಿಗೆ ನೀರು ದೊರೆಯುವವರೆಗೆ ಉದ್ಯೋಗದ ಕೊರತೆ ಕಾಡುತ್ತಿರುತ್ತದೆ ಎಂದು ಸೋನಿಯಾ ಗಾಂಧಿಯ ವಿರುದ್ಧ ಕೇಂದ್ರ ಕೃಷಿ ಖಾತೆ ಸಚಿವ ರಾಧಾ ಮೋಹನ್ ಸಿಂಗ್ ವಿದೇಶಿ ಮೂಲವನ್ನು ಮತ್ತೆ ಕೆದಕಿದ್ದಾರೆ.
 
ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿಂಗ್, ಕಳೆದ 67 ವರ್ಷಗಳಿಂದ ಸರಕಾರದ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ರೈತರ ಒಂದು ಕಿಸಾನ್ ಚಾನೆಲ್ ಆರಂಭಿಸಲು ಸಾಧ್ಯವಾಗಲಿಲ್ಲ. ಮೋದಿ ಬರುವವರೆಗೆ ಕಾಯಬೇಕಾಯಿತು ಎಂದು ಲೇವಡಿ ಮಾಡಿದ್ದಾರೆ. 
 
ಡಿಡಿ ಕಿಸಾನ್ ಚಾನೆಲ್ ಆರಂಭದ ಕುರಿತಂತೆ ಸಂತಸ ವ್ಯಕ್ತಪಡಿಸಿದ ಸಿಂಗ್, ಇದೊಂದು ರೈತರಿಗೆ ಸುವರ್ಣಾವಕಾಶ. ರೈತರಿಗೆ ಹೊಸ ಹೊಸ ತಂತ್ರಜ್ಞಾನಗಳ ಅರಿವು ಮೂಡಿಸುತ್ತದೆ ಎಂದರು.
 
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳಲ್ಲಿಯೇ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸವಾಲ್ ಎದುರಾಗಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ರಾಧಾ ಮೋಹನ್ ಸಿಂಗ್ ಎಂದು ಹೇಳಿದ್ದಾರೆ.
 

Share this Story:

Follow Webdunia kannada