Webdunia - Bharat's app for daily news and videos

Install App

ಹಸುವನ್ನು ರಕ್ಷಿಸಲು ಸಿಂಹವನ್ನೇ ಎದುರಿಸಿದ ಅಕ್ಕ-ತಂಗಿ

Webdunia
ಶುಕ್ರವಾರ, 21 ಅಕ್ಟೋಬರ್ 2016 (09:39 IST)
ತಮ್ಮ ಪ್ರೀತಿಯ ಹಸುವನ್ನು ರಕ್ಷಿಸಲು ಹದಿಹರೆಯದ ಸಹೋದರಿಯರಿಬ್ಬರು ಕ್ರೂರ ಪ್ರಾಣಿ ಸಿಂಹವನ್ನೇ ಎದುರಿಸಿ ನಿಜವಾದ ಅರ್ಥದಲ್ಲಿ ಗೋರಕ್ಷಣೆಯನ್ನು ಮಾಡಿದ ಸಾಹಸಮಯ ಘಟನೆ ಅಹಮದಾಬಾದ್‌ ಬಳಿ ನಡೆದಿದೆ. 

ಅಮ್ರೇಲಿ ಜಿಲ್ಲೆಯ ಗಿರ್ ಅಭಯಾರಣ್ಯದ ಮೆಂಧವಾಸ್ ನಿವಾಸಿಗಳಾದ ಸಂತೋಕ್ ರಬರಿ (19) ಮತ್ತು ಆಕೆಯ ತಂಗಿ ಮೈಯಾ ಚಿಕ್ಕಂದಿನಿಂದಲೂ ಅರಣ್ಯದಲ್ಲಿ ದನಗಳನ್ನು ಮೇಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ 10 ವರ್ಷಗಳ ಹಿಂದೆ ತಮ್ಮ ತಂದೆ ಪಾರ್ಶ್ವವಾಯು ಪೀಡಿತರಾದಾಗಿನಿಂದ ಅವರಿಬ್ಬರು ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ. 
 
ಎಂದಿನಂತೆ ಕೆಲ ದಿನಗಳ ಹಿಂದೆ ದನಗಳೊಂದಿಗೆ ಅವರು ಕಾಡಿಗೆ ಹೋಗಿದ್ದರು. ಆ ಸಮಯದಲ್ಲಿ ಸಿಂಹವೊಂದು ದನಗಳ ಮೇಲೆ ದಾಳಿ ಮಾಡಲು ಹೊಂಚು ಹಾಕಿದೆ. ಸಿಂಹ ಹತ್ತಿರ ಬರುತ್ತಿದ್ದಂತೆ ಸಹೋದರಿಯರು ಕೈಯ್ಯಲ್ಲಿ ಕಟ್ಟಿಗೆ ಹಿಡಿದು ಸಿಂಹ ಮತ್ತು ಆಕಳ ನಡುವೆ ನಿಂತಿದ್ದಾರೆ ಮತ್ತು ಸಿಂಹದ ಕಣ್ಣನ್ನು ದಿಟ್ಟಿಸಿ ನೋಡಿದ್ದಾರೆ. ಸಹೋದರಿಯರ ದಿಟ್ಟತನಕ್ಕೆ ಸಿಂಹವೇ ಹಿಮ್ಮೆಟ್ಟಿದೆ. 
 
ಅಕ್ಕ-ತಂಗಿಯರ ಈ ಸಾಹಸವನ್ನು ಕೇಳಿ ಗ್ರಾಮದಲ್ಲಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಗಿದೆ.
 
ಈ ಕುರಿತು ಪ್ರತಿಕ್ರಿಯಿಸುವ ಸಬೋದರಿಯರು ಸಿಂಹದ ಬಗ್ಗೆ ತಿಳಿದುಕೊಂಡಿದ್ದು ನಮಗೆ ಸಹಾಯಕವಾಯಿತು. ನೀವು ಸಿಂಹಕ್ಕೆ ಬೆನ್ನು ತೋರಿಸಿದರೆ ಅದು ದಾಳಿ ನಡೆಸುತ್ತದೆ. ದೃಢವಾಗಿ ನಿಂತರೆ ಅದು ದಾಳಿ ನಡೆಸುವುದಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ತಮಿಳುನಾಡು ಗವರ್ನರ್ ರವಿ ವಯಸ್ಸು 70 ದಾಟಿದ್ರೂ ಏನು ಎನರ್ಜಿ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments