ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ನೆಲಿಸಿದ್ದಾನೆ ಎಂದು ಭಾರತೀಯ ನ್ಯೂಸ್ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಭಹಿರಂಗವಾಗಿದ್ದು, ಮುಂಬೈ ದಾಳಿ ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ ರಕ್ಷಿಸುತ್ತಿದ್ದು, ಈತನನ್ನು ಭಾರತಕ್ಕೆ ಪಾಕ್ ಸರ್ಕಾರ ಒಪ್ಪಿಸುತ್ತದೆ ಎನ್ನುವುದು ಕನಸಿನ ಮಾತು ಎಂದು ಮಾಜಿ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಡಿ-13, ಬ್ಲಾಕ್-4 ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್ ಆಶ್ರಯ ಪಡೆದಿದ್ದಾನೆ ಎಂದು ಸಿಎನ್ಎನ್-ನ್ಯೂಸ್18 ಖಾಸಗಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಭಹಿರಂಗವಾಗಿದೆ.
ಪಾಕಿಸ್ತಾನದ ರಾಜಧಾನಿ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂ ವಾಸಿಸುತ್ತಿದ್ದು, ಪಾತಕಿಯ ಮನೆಯ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಇದರಿಂದ ಭೂಗತ ಪಾತಕಿಯನ್ನು ಪಾಕಿಸ್ತಾನ ಸರಕಾರ ಭಾರತಕ್ಕೆ ಒಪ್ಪಿಸುತ್ತದೆ ಎನ್ನುವುದು ಕನಸಿನ ಮಾತು ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಮುಖಂಡ ಚಿದಂಬರಂ ಹೇಳಿದ್ದಾರೆ.