Webdunia - Bharat's app for daily news and videos

Install App

ಮೊದಲ ಪತ್ನಿಗಾಗಿ ಎರಡನೇ ಪತ್ನಿಯನ್ನೇ ಕೊಂದ ಪತಿ ಮಹಾಶಯ..!?

Webdunia
ಗುರುವಾರ, 26 ಅಕ್ಟೋಬರ್ 2017 (17:10 IST)
ನವದೆಹಲಿ: ಎರಡು ದಿನದ ಹಿಂದೆ ವಾಯುವ್ಯ ದೆಹಲಿಯ ರೋಹಿಣಿಯಲ್ಲಿ ನಡೆದಿದ್ದ ಗೃಹಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಬೆಳ್ಳಂಬೆಳಿಗ್ಗೆ ಪತಿ ಹಾಗೂ ಒಂದು ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ಹೊರಟಿದ್ದ ಮಹಿಳೆಯ ಹತ್ಯೆ ನಡೆದಿತ್ತು. ದುಷ್ಕರ್ಮಿಗಳು ತನ್ನ ಹಾಗೂ ಮಗುವಿನ ಎದುರಲ್ಲೇ ತನ್ನ ಪತ್ನಿ ಪ್ರಿಯಾ ಮೆಹ್ರಾಳನ್ನು ಕೊಂದಿರುವುದಾಗಿ ಪತಿ ಪಂಕಜ್ ಮೆಹ್ರಾ ಪೊಲೀಸರಿಗೆ ದೂರು ನೀಡಿದ್ದ.

ಪೊಲೀಸರ ವಿಚಾರಣೆಯಲ್ಲಿ ಪ್ರಿಯಾ ಮೆಹ್ರಾರನ್ನು ಕೊಂದಿದ್ದು ಆಕೆಯ ಪತಿ ಪಂಕಜ್ ಎಂಬುದು ಬಹಿರಂಗವಾಗಿದೆ. ಪಂಕಜ್ ಮೆಹ್ರಾ ಪೊಲೀಸರ ಎದುರು ತನ್ನ ಪತ್ನಿಯನ್ನ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪಂಕಜ್‌ಗೆ ಪ್ರಿಯಾ ಎರಡನೇ ಪತ್ನಿ. ಮೊದಲ ಪತ್ನಿಯಿಂದ ದೂರವಾದ ನಂತರ ಪಂಕಜ್ ಪ್ರಿಯಾಳನ್ನು ವಿವಾಹವಾಗಿದ್ದ. ಆದರೆ ಇತ್ತೀಚೆಗೆ ಪಂಕಜ್ ಮತ್ತೆ ಮೊದಲ ಪತ್ನಿಯೊಂದಿಗೆ ಸಾಂಗತ್ಯ ಬೆಳೆಸಿದ್ದ. ಮೊದಲ ಪತ್ನಿಯೊಂದಿಗೆ ಸಂಸಾರ ಆರಂಭಿಸುವ ನಿಟ್ಟಿನಲ್ಲಿ ಪಂಕಜ್ ಎರಡನೇ ಹೆಂಡ್ತಿ ಪ್ರಿಯಾಳನ್ನು ಕೊಂದಿದ್ದಾನೆ ಎನ್ನಲಾಗಿದೆ. 

ಪಂಕಜ್ ಕಾರಿನಲ್ಲಿ ಪ್ರಿಯಾಳಿಗೆ ಪಿಸ್ತೂಲ್‌ ನಿಂದ ಶೂಟ್ ಮಾಡಿದ ನಂತರ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ಯುವವರೆಗೆ ಪ್ರಿಯಾ ಜೀವಂತವಾಗಿದ್ದರು. ಆಕೆ ಕಣ್ಣುಗಳನ್ನು ಮಿಟುಕಿಸುತ್ತಿದ್ದರು. ಆದರೆ ಅರ್ಧಗಂಟೆಯ ನಂತರ ಪ್ರಿಯಾ ಮೃತಪಟ್ಟಿದ್ದಾರೆ ಎಂದು ಪಂಕಜ್ ತಂಗಿ ಸಬೀನಾ ತಿಳಿಸಿದ್ದಾರೆ.

ಪ್ರಿಯಾಳನ್ನು ಕೊಂದ ಪಂಕಜ್ ಮೊದಲು ವಿಚಾರಣೆ ನಡೆಸಿದಾಗ ದೊಡ್ಡ ನಾಟಕವನ್ನೇ ಆಡಿದ್ದ. ನಾನು ಬಡ್ಡಿದಾರರ ಬಳಿ ಸುಮಾರು 5 ಲಕ್ಷ ರೂ. ಸಾಲವನ್ನು ಪಡೆದಿದ್ದೆ. ಆದರೆ ಅದನ್ನು ಹಿಂದಿರುಗಿಸಲು ತಡವಾಗಿದ್ದರಿಂದ ಸಾಲ ಕೊಟ್ಟವರು ಚಕ್ರ ಬಡ್ಡಿ ಸೇರಿಸಿ 40 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಷ್ಟೊಂದು ಮೊತ್ತದ ಹಣ ನೀಡಲು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆಸಿರಬಹುದು. ಆದರೆ ಈ ದಾಳಿಯಲ್ಲಿ ಪತ್ನಿ ಸಾವನ್ನಪ್ಪಿದಳು ಎಂದು ಹೇಳಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments