Webdunia - Bharat's app for daily news and videos

Install App

ದೆವ್ವವನ್ನು ಹಿಡಿಯಲು ಹೊರಟ ಪೊಲೀಸರು

Webdunia
ಗುರುವಾರ, 2 ಜುಲೈ 2015 (11:52 IST)
ಉತ್ತರಪ್ರದೇಶದ ಸಚಿವ ಆಜಂ ಖಾನ್ ಕಾಣೆಯಾದ ತಮ್ಮ ಎಮ್ಮೆಗಳನ್ನು ಹುಡುಕಲು ಪೊಲೀಸರನ್ನು ಕಳುಹಿಸಿದ ಸಂಗತಿ ನಿಮಗೆ ಗೊತ್ತಿರಲೇಬೇಕು.  ಈಗ ರಾಜ್ಯ ಪೊಲೀಸರಿಗೆ ದೆವ್ವಗಳನ್ನು ಹುಡುಕುವ ಕಾರ್ಯವನ್ನು ವಹಿಸಲಾಗಿದೆ. ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಅಪರಾಧಗಳು ನಡೆಯುತ್ತಿರುವಾಗ ಅದನ್ನು ನಿಯಂತ್ರಣಕ್ಕೆ ತರುವುದರ ಕಡೆ ಚಿತ್ತ ಹರಿಸುವುದನ್ನು ಬಿಟ್ಟು ಭೂತಗಳ ಹಿಂದೋಡಲು ಪೊಲೀಸರನ್ನು ಬಿಟ್ಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ವರದಿಗಳ ಪ್ರಕಾರ ಅಲಹಾಬಾದ್‌ನ ಸಂತ್‌ ನಿರಂಕಾರಿ ರೈಲ್ವೆ ಕ್ರಾಸಿಂಗ್ ಬಳಿ ದೆವ್ವವೊಂದು ಓಡಾಡುತ್ತಿದೆಯಂತೆ. ಈ ವದಂತಿ ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೆವ್ವ ಓಡಾಡುವ ಸುದ್ದಿ ಪ್ರದೇಶದ ತುಂಬ ಹರಡಿದ್ದು ಭಯಕ್ಕೆ ಒಳಗಾಗಿರುವ ಜನರು  ಆ ಪ್ರದೇಶದಲ್ಲಿ ಓಡಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. 
 
ಜನರು ಈ ಕುರಿತು ಪೊಲೀಸರಲ್ಲೂ ದೂರಿದ್ದು ಈ ದೆವ್ವದ ರಹಸ್ಯವನ್ನು ಭೇದಿಸುವಂತೆ ಕೀಡ್‌ಗಂಜ್ ಠಾಣೆ ಪೊಲೀಸರಿಗೆ ಎಸ್ಎಸ್‌ಪಿ ಆದೇಶಿದ್ದಾಕೆ. ಕಳ್ಳರ ಗ್ಯಾಂಗ್‌ವೊಂದು ದೆವ್ವದ ಕತೆ ಸೃಷ್ಟಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. 
 
ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲು ಪೊಲೀಸ್ ಅಧಿಕಾರಿ ಆದೇಶಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments