ಕಳೆದ ವರ್ಷವಷ್ಟೇ ಭಾರತದ ಪೌರತ್ವವನ್ನು ತೆಗೆದುಕೊಂಡಿರುವ ಪಾಕ್ ಮೂಲದ ಗಾಯಕ ಅದ್ನಾನ್ ಸಾಮಿ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ನ್ನು ಶ್ಲಾಘಿಸಿದ್ದಾರೆ.
ಚಾತುರ್ಯದ, ಯಶಸ್ವಿ ಪ್ರೌಢತೆಯ ಕಾರ್ಯಾಚರಣೆ ನಡೆಸಿದ ನಮ್ಮ ಧೈರ್ಯಶಾಲಿ ಮಿಲಿಟರಿ ಪಡೆಗೆ ಮತ್ತು ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಾಮಿ ಅವರ ಈ ಟ್ವೀಟ್ಗೆ ಪಾಕ್ನಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಸಾಮಿ, ಅಲ್ಲಿನ ಜನರು ದೇಶ ಮತ್ತು ಭಯೋತ್ಪಾದನೆಯನ್ನು ಒಂದೇ ರೀತಿಯಾಗಿ ನೋಡುತ್ತಾರೆ ಎಂಬುದು ಅವರ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಹರಿತವಾಗಿ ತಿವಿದಿದ್ದಾರೆ.
ಉರಿ ಸೇನಾ ನೆಲೆಯ ಮೇಲಿನ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದ ಭಾರತ ನಿನ್ನೆ ನಸುಕಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ 50 ಉಗ್ರರ ರುಂಡ ಚೆಂಡಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ