ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

Webdunia
ಭಾನುವಾರ, 2 ಜುಲೈ 2023 (11:02 IST)
ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಗದ್ದುಗೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ಗುದ್ದಾಟಕ್ಕೆ ಇಳಿದಿವೆ. ಅದಕ್ಕಾಗಿ ಮತದಾರರಿಗೆ ಬಂಪರ್ ಆಫರ್ಸ್ ಕೊಡ್ತಿದ್ದಾರೆ. ಎಲೆಕ್ಷನ್ ಗೆಲ್ಲೋಕೆ ರಾಜಕಾರಣಿಗಳು ಏನೇನೋ ತಂತ್ರ ಮಾಡ್ತಾರೆ.

ಭರವಸೆ ಕೊಡ್ತಾರೆ. ಅದಕ್ಕೆ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಕೂಡ ಹೊರತಲ್ಲ. ಯಾಕಂದ್ರೆ ಪವನ್ ಇದೀಗ ಕುಡುಕರಿಗೆ ನೀಡಿರುವ ಆಫರ್ ಹಾಗಿದೆ. ಮತದಾರರಿಗೆ ಪವನ್ ಕೊಟ್ಟ ಪವರ್ ಆಫರ್ ದೇಶಾದ್ಯಂತ ಚರ್ಚೆಯಲ್ಲಿದೆ. 

ಮತ ಪಡೆಯೋಕೆ ಕುಡಿಸಿ, ತಿನ್ನಿಸಿ, ಹಣ ಹಂಚಿ ಮತ ಹಾಕಿಸಿಕೊಳ್ಳೊ ರಾಜಕಾರಣಿಗಳನ್ನ ನೋಡಿದ್ದೀವಿ. ಹೀಗ್ ಮಾಡಿದ್ಮೇಲೂ ರಾಜಕಾರಣಿಗಳು ನಾವೇ ಕುಡಿಸಿದ್ದು ಅಂತ ಹೇಳಿಕೊಳ್ಳಲ್ಲ. ಆದರೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಮದ್ಯಪ್ರಿಯರನ್ನೇ ಬುಟ್ಟಿಗೆ ಹಾಕಿಕೊಳ್ಳುವಂಥ ಭರ್ಜರಿ ಆಫರ್ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆ ಇಳಿಸುವುದಾಗಿ ಹೇಳಿದ್ದಾರೆ. ಈ ಸುದ್ದಿಗೆ ಕುಡುಕರು ಒಂದ್ ಪೆಗ್ ಹೆಚ್ಚೇ ಗಂಟಲಿಗೇರಿಸಿ ಕೇಕೆ ಹಾಕಿದ್ದಾರೆ.

ಆಂಧ್ರ ವಿಧಾನಸಭೆ ಚುನಾವಣೆಗಾಗಿ ಪವನ್ ಪ್ರಚಾರ ಮಾಡ್ತಿದ್ದಾರೆ. ಇತ್ತೀಚೆಗೆ ವಾರಾಹಿ ಯಾತ್ರೆಯಲ್ಲಿ ಮಾತನಾಡ್ತಾ ಕುಡುಕರಿಗೆ ಕಲ್ಲಂಗಡಿ ತಿನ್ನಿಸಿದ್ದಾರೆ. ಹಾಲಿ ಸಿಎಂ ಜಗನ್ ಅಧಿಕಾರಕ್ಕೇರೋ ಮುನ್ನ ಮದ್ಯ ಬ್ಯಾನ್ ಮಾಡೋದಾಗಿ ಹೇಳಿದ್ರು. ಹಾಗೆ ಮಾಡದೇ ಬರೀ ತೆರಿಗೆ ಹೆಚ್ಚಿಸಿ, ಶ್ರಮಿಕರಿಗೆ ಹೊರೆಯಾಗಿದ್ರು. ಫಲಿತಾಂಶ ಕಳ್ ಬಟ್ಟಿ ಕುಡಿದು ಜನ ಹಾಳಾಗುತ್ತಿದ್ದಾರೆ. ಅದಕ್ಕೆ ನಾನು ಮದ್ಯದ ಬೆಲೆ ಕಮ್ಮಿ ಮಾಡ್ತೀನಿ ಎಂದಿದ್ದಾರೆ ಪವನ್. ಕುಡುಕರಿಗೆ ಮೆಗಾ ಕರುಣೆ ತೋರಿಸಿ ಆಂಧ್ರಕ್ಕೇ ಕಿಕ್ಕೇರಿಸಿದ್ದಾರೆ. ಈ ಪರಿಣಾಮ, ನಲ್ಲಿನಲ್ಲಿಯಲ್ಲಿ ಗುಂಡು ಗಲ್ಲಿಗಲ್ಲಿಯಲ್ಲಿ ಕುಡುಕರ ದಂಡು ಶುರುವಾಗೋದು ಗ್ಯಾರೆಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

ಮುಂದಿನ ಸುದ್ದಿ
Show comments