Webdunia - Bharat's app for daily news and videos

Install App

ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

Webdunia
ಭಾನುವಾರ, 2 ಜುಲೈ 2023 (11:02 IST)
ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಗದ್ದುಗೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ಗುದ್ದಾಟಕ್ಕೆ ಇಳಿದಿವೆ. ಅದಕ್ಕಾಗಿ ಮತದಾರರಿಗೆ ಬಂಪರ್ ಆಫರ್ಸ್ ಕೊಡ್ತಿದ್ದಾರೆ. ಎಲೆಕ್ಷನ್ ಗೆಲ್ಲೋಕೆ ರಾಜಕಾರಣಿಗಳು ಏನೇನೋ ತಂತ್ರ ಮಾಡ್ತಾರೆ.

ಭರವಸೆ ಕೊಡ್ತಾರೆ. ಅದಕ್ಕೆ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಕೂಡ ಹೊರತಲ್ಲ. ಯಾಕಂದ್ರೆ ಪವನ್ ಇದೀಗ ಕುಡುಕರಿಗೆ ನೀಡಿರುವ ಆಫರ್ ಹಾಗಿದೆ. ಮತದಾರರಿಗೆ ಪವನ್ ಕೊಟ್ಟ ಪವರ್ ಆಫರ್ ದೇಶಾದ್ಯಂತ ಚರ್ಚೆಯಲ್ಲಿದೆ. 

ಮತ ಪಡೆಯೋಕೆ ಕುಡಿಸಿ, ತಿನ್ನಿಸಿ, ಹಣ ಹಂಚಿ ಮತ ಹಾಕಿಸಿಕೊಳ್ಳೊ ರಾಜಕಾರಣಿಗಳನ್ನ ನೋಡಿದ್ದೀವಿ. ಹೀಗ್ ಮಾಡಿದ್ಮೇಲೂ ರಾಜಕಾರಣಿಗಳು ನಾವೇ ಕುಡಿಸಿದ್ದು ಅಂತ ಹೇಳಿಕೊಳ್ಳಲ್ಲ. ಆದರೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಮದ್ಯಪ್ರಿಯರನ್ನೇ ಬುಟ್ಟಿಗೆ ಹಾಕಿಕೊಳ್ಳುವಂಥ ಭರ್ಜರಿ ಆಫರ್ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆ ಇಳಿಸುವುದಾಗಿ ಹೇಳಿದ್ದಾರೆ. ಈ ಸುದ್ದಿಗೆ ಕುಡುಕರು ಒಂದ್ ಪೆಗ್ ಹೆಚ್ಚೇ ಗಂಟಲಿಗೇರಿಸಿ ಕೇಕೆ ಹಾಕಿದ್ದಾರೆ.

ಆಂಧ್ರ ವಿಧಾನಸಭೆ ಚುನಾವಣೆಗಾಗಿ ಪವನ್ ಪ್ರಚಾರ ಮಾಡ್ತಿದ್ದಾರೆ. ಇತ್ತೀಚೆಗೆ ವಾರಾಹಿ ಯಾತ್ರೆಯಲ್ಲಿ ಮಾತನಾಡ್ತಾ ಕುಡುಕರಿಗೆ ಕಲ್ಲಂಗಡಿ ತಿನ್ನಿಸಿದ್ದಾರೆ. ಹಾಲಿ ಸಿಎಂ ಜಗನ್ ಅಧಿಕಾರಕ್ಕೇರೋ ಮುನ್ನ ಮದ್ಯ ಬ್ಯಾನ್ ಮಾಡೋದಾಗಿ ಹೇಳಿದ್ರು. ಹಾಗೆ ಮಾಡದೇ ಬರೀ ತೆರಿಗೆ ಹೆಚ್ಚಿಸಿ, ಶ್ರಮಿಕರಿಗೆ ಹೊರೆಯಾಗಿದ್ರು. ಫಲಿತಾಂಶ ಕಳ್ ಬಟ್ಟಿ ಕುಡಿದು ಜನ ಹಾಳಾಗುತ್ತಿದ್ದಾರೆ. ಅದಕ್ಕೆ ನಾನು ಮದ್ಯದ ಬೆಲೆ ಕಮ್ಮಿ ಮಾಡ್ತೀನಿ ಎಂದಿದ್ದಾರೆ ಪವನ್. ಕುಡುಕರಿಗೆ ಮೆಗಾ ಕರುಣೆ ತೋರಿಸಿ ಆಂಧ್ರಕ್ಕೇ ಕಿಕ್ಕೇರಿಸಿದ್ದಾರೆ. ಈ ಪರಿಣಾಮ, ನಲ್ಲಿನಲ್ಲಿಯಲ್ಲಿ ಗುಂಡು ಗಲ್ಲಿಗಲ್ಲಿಯಲ್ಲಿ ಕುಡುಕರ ದಂಡು ಶುರುವಾಗೋದು ಗ್ಯಾರೆಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments