ಪ್ರೀತಿಸಿ ಕೈಕೊಟ್ಟಿದ್ದಕ್ಕೆ ಯುವತಿಯೋರ್ವಳು ಪ್ರಿಯತಮನ ಮೇಲೆ ಆ್ಯಸಿಡ್ ಎರಚಿದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಜಯನಗರದ ಪೈಪ್ಲೈನ್ ರಸ್ತೆಯಲ್ಲಿ ಈ ಕೃತ್ಯವನ್ನೆಸಗಲಾಗಿದ್ದು ಆರೋಪಿಯನ್ನು ಶ್ರೀರಾಮಪುರದ ಲಿಡಿಯಾ(26) ಎಂದು ಗುರುತಿಸಲಾಗಿದೆ. ದಾಳಿಗೊಳಗಾದ ಜಯ್ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಬಟ್ಟೆ ವ್ಯಾಪಾರ ನಡೆಸುತ್ತಿರುವ ಕುಮಾರ್ ಮತ್ತು ಖಾಸಗಿ ಆಸ್ಪತ್ತೆಯಲ್ಲಿ ನರ್ಸ್ ಆಗಿರುವ ಲಿಡಿಯಾ ನಡುವೆ ಎಂಟು ವರ್ಷಗಳ ಹಿಂದೆ ಸ್ನೇಹವಾಗಿತ್ತು. ಬಳಿಕ ಪರಷ್ಪರ ಪ್ರೀತಿಸಲು ತೊಡಗಿದ್ದರೂ, ಕಳೆದೆರಡು ವರ್ಷಗಳ ಹಿಂದೆ ಜಯಕುಮಾರ್ ಆಕೆಯನ್ನು ದೂರ ಮಾಡಿದ್ದ. ಆದರೆ ಬೆನ್ನು ಬಿಡದ ಲಿಡಿಯಾ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದಳು.
ಆದರೆ ಜಯ ಕುಮಾರ್ ಬೇರೆ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ. ಇದರಿಂದ ಸಿಟ್ಟಿಗೆದ್ದ ಲಿಡಿಯಾ ಸೋಮವಾರ ಗೆಳತಿಯ ಜತೆ ಬೈಕ್ನಲ್ಲಿ ಆತನನ್ನು ಹಿಂಬಾಲಿಸಿ ಮುಖಕ್ಕೆ ಆ್ಯಸಿಡ್ ಸುರಿದು ಬ್ಲೇಡ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ