ಮಾಫಿಯಾ ಡಾನ್ ರಾಜಕಾರಣಿ ಡಿ.ಪಿ.ಯಾದವ್ರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವೇದಿಕೆ ಹಂಚಿಕೊಂಡಿರುವುದು ನಿತೀಶ್ ಕಟಾರಾ ತಾಯಿ ನೀಲಮ್ ಕಟಾರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಗೆಳೆಯರಾಗಿದ್ದು, ತಾವು ಯಾವುದೇ ಕ್ಷಣದಲ್ಲಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ನಿನ್ನೆ ಯಾದವ್ ಹೇಳಿಕೆ ನೀಡಿದ್ದರು.
ನಿತೀಶ್ ಕಟಾರಾ ಮತ್ತು ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ವಿಕಾಸ್ ಯಾದವ್ ತಂದೆಯೇ ಡಿ.ಪಿ.ಯಾದವ್, ಕಳೆದ 2004ರ ಫೆಬ್ರವರಿ 20 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಕ್ರಿಮಿನಲ್ ಆರೋಪಗಳಿಂದ ಪಕ್ಷದಲ್ಲಿ ಎದುರಾದ ಅಪಸ್ವರದಿಂದ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಒಂದು ವೇಳೆ ಡಿ.ಪಿ.ಯಾದವ್ನಂತಹ ಕ್ರಿಮಿನಲ್ ರಾಜಕಾರಣಿಗಳಿಗೆ ಒಳ್ಳೆಯ ದಿನಗಳು ಬಂದಲ್ಲಿ ಬಡವರಿಗೆ, ಶೋಷಿತರಿಗೆ ದೇಶದಲ್ಲಿ ಬದುಕಲು ಅವಕಾಶವಿಲ್ಲದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಐಎಎಸ್ ಅಧಿಕಾರಿಯ ಪುತ್ರನಾಗಿದ್ದ ನಿತೀಶ್ ಕಟಾರಾ ಅವರನ್ನು ವಿಕಾಸ್ ಯಾದವ್ ಮತ್ತು ಆತನ ಸಹಚರರಾದ ವಿಶಾಲ್ ಮತ್ತು ಸುಖದೇವ್ ಅಪಹರಿಸಿ ಹತ್ಯೆಗೈದಿದ್ದರು
ನಿತೀಶ್ನನ್ನು ಹತ್ಯೆಗೈದ ಆರೋಪಿಗಳಉ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಮರಣದಂಡನೆಯನ್ನು ವಿಧಿಸಬೇಕು ಎಂದು ನಿತೀಶ್ ತಾಯಿ ನೀಲಮ್ ಕಟಾರಾ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ.