Select Your Language

Notifications

webdunia
webdunia
webdunia
webdunia

ಮೋದಿ ಮನವಿಗೆ ಸ್ಪಂದನೆ: ಸೈಕಲ್ ತುಳಿಯುತ್ತಾ ಸಂಸತ್ತಿಗೆ ಬಂದ ಬಿಜೆಪಿ ಸಂಸದ

ಮೋದಿ ಮನವಿಗೆ ಸ್ಪಂದನೆ: ಸೈಕಲ್ ತುಳಿಯುತ್ತಾ ಸಂಸತ್ತಿಗೆ ಬಂದ ಬಿಜೆಪಿ ಸಂಸದ
ಬಿಕನೇರ್(ರಾಜಸ್ಥಾನ್) , ಸೋಮವಾರ, 20 ಏಪ್ರಿಲ್ 2015 (17:21 IST)
ಸಂಸತ್ತಿನಲ್ಲಿ ನಡೆಯುತ್ತಿರುವ ಅಧಿವೇಶನಕ್ಕಾಗಿ ಬಿಕನೇರ್ ಸಂಸದೀಯ ಕ್ಷೇತ್ರದ ಬಿಜೆಪಿ ಸಂಸತ್ ಸದಸ್ಯ  ಅರ್ಜುನ್ ರಾಮ್ ಮೇಘವಾಲ್ ಸೈಕಲ್ ಮೇಲೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.  

ನಗರದಲ್ಲಿ ಸುತ್ತಾಡಲು ಸೈಕಲ್ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯನ್ನು ಸ್ವೀಕರಿಸಿದ್ದೇನೆ. ಇನ್ಮುಂದೆ ಸಂಸತ್ತಿಗೆ ಸೈಕಲ್ ಮೇಲೆ ತೆರಳುವುದಾಗಿ ಮೇಘವಾಲ್ ಹೇಳಿದ್ದಾರೆ.

ಕಾರ್ಬನ್ ಹೊಗೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೈಕಲ್ ತುಳಿಯಲು ನಿರ್ಧರಿಸಿದೆ. ಇದರಿಂದ ದೇಶಕ್ಕೂ ಮತ್ತು ದೇಹಕ್ಕೂ ಒಳ್ಳೆಯದಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  

ಇದಕ್ಕಿಂತ ಮೊದಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸದರಿಗೆ ಕರೆ ನೀಡಿ ತಿಂಗಳಲ್ಲಿ ಒಂದು ದಿನವಾದರೂ ಸೈಕಲ್ ಬಳಸಿ ಎಂದು ಕರೆ ನೀಡಿದ್ದರು.

Share this Story:

Follow Webdunia kannada