ಜೈಲಿನಲ್ಲಿ ಬಂಧಿಯಾಗಿರುವ ಆಪ್ ಪಕ್ಷದ ನೈನಿತಾಲ್ ಅಭ್ಯರ್ಥಿ ಬಲ್ಲಿ ಸಿಂಗ್ ಚೀಮಾ ಜಾಮೀನು ಪಡೆಯಲು ನಿರಾಕರಿಸಿದ್ದಾರೆ. ತಾನು ಹಲ್ದ್ವಾನಿ ಕಾರಾಗೃಹದಿಂದಲೇ ಚುನಾವಣೆಯನ್ನು ಎದುರಿಸುವುದಾಗಿ ಅವರು ಹೇಳಿದ್ದಾರೆ ಎಂದು ಆಪ್ ಪಕ್ಷದ ಮೂಲಗಳು ತಿಳಿಸಿವೆ
ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಮೇಲೆ ಕೇಸ್ ದಾಖಲಾಗಿದೆ.
ಅಧಿಕಾರಿಗಳು ತಮ್ಮ ಪ್ರಚಾರ ವಾಹನವನ್ನು ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ರುದ್ರಪುರದ ಎಸ್ಎಸ್ಪಿ ಶಿವಿರ ಕಾರ್ಯಾಲಯದ ಹೊರಗೆ ಏಪ್ರಿಲ್ 22 ರಂದು ಧರಣಿ ಕುಳಿತುಕೊಂಡ ಕಾರಣಕ್ಕೆ ಅವರನ್ನು ಮತ್ತು ಅವರ ಸಹೋದ್ಯೋಗಿಗಳನ್ನು ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ವಾಹನ ಬಳಕೆಗಾಗಿ ಅಗತ್ಯ ಅನುಮತಿ ಪಡೆದುಕೊಂಡ ನಂತರವೂ ತಮ್ಮ ಪ್ರಚಾರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚೀಮಾ ಅಧಿಕಾರಿಗಳ ಮೇಲೆ ಕಿರುಕುಳದ ಆರೋಪವನ್ನು ಹೊರಿಸಿದ್ದರು.