ಅರವಿಂದ್ ಕೇಜ್ರಿವಾಲ್ ಗೆ ಕ್ಯಾನ್ಸರ್ ಲಕ್ಷಣ ಶುರುವಾಗಿದ್ಯಂತೆ, ಜಾಮೀನು ವಿಸ್ತರಿಸಲು ಕಾರಣ ನೀಡಿದ ನಾಯಕ

Krishnaveni K
ಮಂಗಳವಾರ, 28 ಮೇ 2024 (09:31 IST)
ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಮಧ್ಯಂತರ ಜಾಮೀನಿನಲ್ಲಿ ಹೊರಗಡೆ ಬಂದಿದ್ದಾರೆ. ಆದರೆ ಅವರಿಗೆ ಈಗ ಕ್ಯಾನ್ಸರ್ ಲಕ್ಷಣ ಶುರುವಾಗಿದೆಯಂತೆ.

ಹೀಗೆಂದು ಎಎಪಿ ನಾಯಕಿ ಅತಿಶಿ ಹೇಳಿಕೆ ನೀಡಿದ್ದಾರೆ. ಇದೇ ಕಾರಣವನ್ನಿಟ್ಟುಕೊಂಡು ಮಧ್ಯಂತರ ಜಾಮೀನು ವಿಸ್ತರಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಗ್ಗೆ ಎಎಪಿ ನಾಯಕಿ ಅತಿಶಿ ವಿವರಣೆ ನೀಡಿದ್ದಾರೆ.

ಕೇಜ್ರಿವಾಲ್ ಜೈಲಿನಲ್ಲಿದ್ದಾಗಲೇ 6.-7 ಕಿ.ಲೋ. ತೂಕ ಕಳೆದುಕೊಂಡಿದ್ದರು. ಜೈಲಿನಿಂದ ಹೊರಬಂದ ಮೇಲೂ ಅವರ ತೂಕ ಹೆಚ್ಚಾಗಿಲ್ಲ. ಹೀಗಾಗಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದಾರೆ. ಈ ವೇಳೆ ಅವರಲ್ಲಿ ಕೀಟೋನ್ ಪ್ರಮಾಣ ಹೆಚ್ಚಳವಾಗಿದೆ. ಕೀಟೋನ್ ಪ್ರಮಾಣ ಹೆಚ್ಚಳವು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಲಕ್ಷಣವಾಗಿದೆ ಎಂದು ಅತಿಶಿ ಹೇಳಿದ್ದಾರೆ.

ಮೂತ್ರದಲ್ಲಿ ಕೀಟೋನ್ ಪ್ರಮಾಣ ಹೆಚ್ಚಳವಾದಂತೆ ಅಸಾಮಾನ್ಯ ರಕ್ತದೊತ್ತಡ, ಗ್ಲುಕೋಸ್ ಕೂಡಾ ಹೆಚ್ಚಳವಾಗಿದೆ. ಇದರಿಂದ ಮಧುಮೇಹ ಹೆಚ್ಚಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಹೀಗಾಗಿ ಅವರಿಗೆ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿರುವುದರಿಂದ 7 ದಿನಗಳವರೆಗೆ ಮಧ್ಯಂತರ ಜಾಮೀನು ಅರ್ಜಿ ವಿಸ್ತರಣೆ ಮಾಡಿ ಎಂದು ಕೋರ್ಟ್ ಗೆ ಕೇಜ್ರಿವಾಲ್ ಪರ ವಕೀಲರು ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಜೂನ್ 1 ರಂದು ಕೇಜ್ರಿವಾಲ್ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಲಿದ್ದು, ಜೂನ್ 2 ರಂದು ಮತ್ತೆ ಅವರು ತಿಹಾರ್ ಜೈಲಿಗೆ ಹೋಗಬೇಕಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತ್ನಿ ಜತೆ ಸೆಲ್ಪೀ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದ ಪತಿ

ಸತೀಶ್ ಜಾರಕಿಹೊಳಿ ಅಂತಹ ವ್ಯಕ್ತಿಯಲ್ಲ: ಸಚಿವ ಬೋಸರಾಜು

ಮಹೇಶ್‌ ಶೆಟ್ಟಿ ತಿಮರೋಡಿ ಜತೆಗಿನ ಮಾತುಕತೆ ವಿಡಿಯೋ, ಹೊಸ ಬಾಂಬ್ ಸಿಡಿಸಿದ ಚಿನ್ನಯ್ಯನ 2ನೇ ಪತ್ನಿ

ಜುಬೀನ್ ಗಾರ್ಗ್ ಸಾವಿನ ಬಗ್ಗೆ ಅನುಮಾನ, ತನಿಖೆಗೆಗೆ ಅಸ್ಸಾಂ ಸಿಎಂ ಆದೇಶ

ಕುರುಬರ ಬಗ್ಗೆ ಮಾತನಾಡಿ ಕೇಸ್ ಹಾಕಿಸಿಕೊಂಡ ಛಲವಾದಿ ನಾರಾಯಣಸ್ವಾಮಿ, ಶ್ರೀವತ್ಸ

ಮುಂದಿನ ಸುದ್ದಿ
Show comments