Webdunia - Bharat's app for daily news and videos

Install App

ದೆಹಲಿಯಲ್ಲಿ ಮರುಚುನಾವಣೆಗೆ ಒತ್ತಾಯಿಸಿ ಮನೆ ಮನೆ ಅಭಿಯಾನ ಆರಂಭಿಸಿದ ಆಪ್

Webdunia
ಬುಧವಾರ, 13 ಆಗಸ್ಟ್ 2014 (15:45 IST)
ಮರು ಚುನಾವಣೆಗೆ ಒತ್ತಾಯಿಸುತ್ತಿರುವ ಆಪ್ ತಮ್ಮ ಬೇಡಿಕೆಗೆ ಜನರ ಬೆಂಬಲವನ್ನು ಕೋರಿ ಮನವಿ ಅಭಿಯಾನವನ್ನು ಆರಂಭಿಸಿದೆ. 
 
ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ, 49 ದಿನಗಳ ಕಾಲ ಆಪ್ ದೆಹಲಿಯಲ್ಲಿ ಆಡಳಿತ ನಡೆಸಿತ್ತು. ಕಳೆದ ಫೆಬ್ರುವರಿ ತಿಂಗಳಲ್ಲಿ ವಿಧಾನಸಭೆಯಲ್ಲಿ ಲೋಕಜನಪಾಲ್ ಮಸೂದೆಯನ್ನು ಪಾಸ್ ಮಾಡಲು ಸರಕಾರ ವಿಫಲವಾದುದರಿಂದ ನೊಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.
 
ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದ್ದು, ಯಾವ ಪಕ್ಷವು ಕೂಡ ಸರಕಾರ ರಚಿಸುವ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ . 
 
ಕಳೆದ ಅನೇಕ ದಿನಗಳಿಂದ ಆಪ್ ಮರು ಚುನಾವಣೆ ನಡೆಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರೂ ಕೇಂದ್ರ ಅದಕ್ಕೆ ಸ್ಪಂದಿಸುತ್ತಿಲ್ಲವಾದ್ದರಿಂದ ಮನೆ ಮನೆ ಭೇಟಿ ನೀಡಿ ಸಹಿ ಸಹಿತ ಮನವಿಯನ್ನು ಸಂಗ್ರಹಿಸಿ  ಭಾರತ ಸರಕಾರಕ್ಕೆ ಕಳುಹಿಸುವ ಉದ್ದೇಶವನ್ನು ಆಪ್ ಹೊಂದಿದೆ. 
 
 ಸರಕಾರ ದೆಹಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೂಡ ನೀಡುತ್ತಿಲ್ಲ, ದೆಹಲಿಗೆ ಚುನಾಯಿತ ಸರಕಾರವನ್ನು ನೀಡಲು ಮಾರ್ಗವನ್ನು ಕೂಡ ತೆರವುಗೊಳಿಸುತ್ತಿಲ್ಲ. ಆದ್ದರಿಂದ ಆಪ್, ಮನೆ ಮನೆ ಪ್ರಚಾರ ನಡೆಸಿ ಜನರೇ  ಚುನಾಯಿತ ಸರಕಾರಕ್ಕೆ ಒತ್ತಾಯಿಸುವಂತೆ ಮಾಡಲಿದೆ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments