ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Webdunia
ಶುಕ್ರವಾರ, 10 ನವೆಂಬರ್ 2023 (14:17 IST)
ಆರೋಪಿಗಳು ಮಹಿಳೆಗೆ ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯವನ್ನು ನೀಡಿ  ಆಕೆ ಪ್ರಜ್ಞಾಹೀನಳಾದಾಗ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನೆಸಗಿದ್ದಾರೆ ಎಂದು ಮುರಾದ್‌ನಗರ್  ಪೊಲೀಸರು ತಿಳಿಸಿದ್ದಾರೆ. 
 
ನಾನು ನಿನಗೆ ಉತ್ತಮ ಕೆಲಸವನ್ನು ಹುಡುಕಿ ಕೊಡುತ್ತೇನೆ. ಮುರಾದ್‌ನಗರದಲ್ಲಿ ನನ್ನನ್ನು ಭೇಟಿಯಾಗು ಎಂದು ಹೇಳಿದ್ದ. ಆಕೆ ಅಲ್ಲಿಗೆ ತಲುಪಿದಾಗ ಕಾರ್ ಒಳಗೆ ಕುಳಿತುಕೊಳ್ಳುವಂತೆ ಹೇಳಿದ. ಆ ಸಮಯದಲ್ಲಿ ಇರ್ಫಾನ್ ಮತ್ತು  ಮತ್ತೊಬ್ಬ ಅಪರಿಚಿತ ಆರೋಪಿ ಕೂಡ ಕಾರಿನಲ್ಲಿದ್ದರು. ಕಾರ್ ಒಳಗೆ ಕುಳಿತುಕೊಂಡ ಆಕೆಗೆ ಆರೋಪಿಗಳು ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯವನ್ನು ನೀಡಿದ್ದಾರೆ . ಆಕೆ ಪ್ರಜ್ಞಾಹೀನಳಾದಾಗ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನೆಸಗಿದ್ದಾರೆ ಎಂದು ಮುರಾದ್‌ನಗರ್  ಪೊಲೀಸ್ ಠಾಣಾಧಿಕಾರಿ ಆರ್. ಪಿ. ಶರ್ಮಾ ತಿಳಿಸಿದ್ದಾರೆ. 
 
40 ವರ್ಷದ ಮಹಿಳೆಯೊಬ್ಬರಿಗೆ ಅಮಲೇರಿಸುವ ಪದಾರ್ಥ ತಿನ್ನಿಸಿ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮುರಾದ್‌ನಗರ್ ಎಂಬಲ್ಲಿ ನಡೆದಿದೆ. ಮೂವರು ದುಷ್ಕರ್ಮಿಗಳು ಈ ಕುಕೃತ್ಯವನ್ನೆಸಗಿದ್ದು ನಂತರ ಆಕೆಯನ್ನು ಗಂಗಾ ಕಾಲುವೆ ಬಳಿ ಎಸೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ. 
 
 
ಅಸ್ವಸ್ಥಳಾಗಿ ಬಿದ್ದಿದ್ದ ಆಕೆಯನ್ನು ನೋಡಿದ ಗಸ್ತು ತಿರುಗುತ್ತಿದ್ದ ಪೊಲೀಸರು ಮುರಾದ್‌ನಗರ ಪೊಲೀಸ್ ಠಾಣೆಗೆ ಆಕೆಯನ್ನು ಕೊಂಡೊಯ್ದರು. ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವಿಧವೆಯಾಗಿರುವ ಮಹಿಳೆಗೆ ಮೂವರು ಮಕ್ಕಳಿದ್ದು, ಮೀರತ್ ರಸ್ತೆ ಬಳಿ ಇರುವ ತನ್ನ ಮನೆಯ ಬಳಿಯಲ್ಲಿ ಹಣ್ಣು ಮತ್ತು ತರಕಾರಿಯ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. 
 
ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರನ್ನು ಪೀಡಿತೆ ಗುರುತಿಸಿದ್ದಾಳೆ. ಅವರಲ್ಲೊಬ್ಬ ಸಂಜಯ್ ನಗರದ ನಿವಾಸಿ ವಕೀಲ್ ಎಂಬಾತನಾಗಿದ್ದು, ಪೀಡಿತಳ ಕಾಲೋನಿಯಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿದ್ದಾನೆ. ಇನ್ನೊಬ್ಬನನ್ನು ಇರ್ಫಾನ್ ಎಂದು ಗುರುತಿಸಲಾಗಿದ್ದು, ಇದೀಗ ಮೂವರು ಆರೋಪಿಗಳು ಈಗ ನಾಪತ್ತೆಯಾಗಿದ್ದಾರೆ. 
 
ತನ್ನ ಗಂಡನ ಮರಣಾನಂತರ ಅಮ್ರೋಹಾದಿಂದ ಗಾಜಿಯಾಬಾದಿಗೆ ವಾಸ್ತವ್ಯ ಬದಲಾಯಿಸಿದ್ದ ಮಹಿಳೆ, ಆರೋಪಿ ವಕೀಲನ ಹೋಟೆಲ್‌ನಿಂದ ಆಗಾಗ್ಗೆ ಊಟವನ್ನು ತರುತ್ತಿದ್ದರಾದ್ದರಿಂದ ಆತನ ಪರಿಚಯ ಮಹಿಳೆಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

ಮುಂದಿನ ಸುದ್ದಿ
Show comments