Webdunia - Bharat's app for daily news and videos

Install App

ಶಿಕ್ಷಕ ಬೈದಿದ್ದರಿಂದ ಮನನೊಂದ ಬಾಲಕ 4ನೇ ಮಹಡಿಯಿಂದ ಜಂಪ್ ಮಾಡಿದ!

Webdunia
ಬುಧವಾರ, 25 ಫೆಬ್ರವರಿ 2015 (10:01 IST)
ಮುಂಬೈ ಬಳಿ ಶಾಲೆಯ ಶಿಕ್ಷಕ ಬೈದಿದ್ದರಿಂದ ಮನನೊಂದ 12 ವರ್ಷದ ಬಾಲಕನೊಬ್ಬ ಶಾಲೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಗೌರವ್ ಕಾಂಕ್ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ನವಿ ಮುಂಬೈನ  ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ.  ಅವನಿಗೆ ಮಂಗಳವಾರ ಬೆಳಿಗ್ಗೆ ವಿಜ್ಞಾನ ಶಿಕ್ಷಕರು ಬಾಲಕನ ದುರ್ನಡತೆಗಾಗಿ ಬೈದಿದ್ದರಿಂದ ಬಾಲಕ ಮನನೊಂದಿದ್ದ.ಗೌರವ್ ಶಾಲೆಯ ಕೋಣೆಯ ಕಿಟಕಿಯನ್ನು ತೆರೆದು ಅಲ್ಲಿಂದ ಕೆಳಕ್ಕೆ ಜಂಪ್ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಮಕ್ಕಳ ಸುರಕ್ಷತೆಗೆ ಗಮನಹರಿಸದಿರುವ ಶಾಲೆಯ ವಿರುದ್ಧ ಪೋಷಕರ ಗುಂಪೊಂದು ಪ್ರತಿಭಟನೆ ನಡೆಸಿದೆ.

ಶಾಲೆಯ ಆಡಳಿತವರ್ಗ ಈ ಘಟನೆಗೆ ಹೊಣೆಯಾಗಿದೆ. ಶಾಲೆಯ ತರಗತಿಗಳ ಕಿಟಕಿಗಳಲ್ಲಿ ಕಂಬಿಗಳನ್ನು ಹಾಕಿಲ್ಲ ಎಂದು ಪೋಷಕರೊಬ್ಬರು ದೂರಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲರು ಮಾತ್ರ ಇದು ಶಾಲೆಯ ನಿರ್ಲಕ್ಷ್ಯ ಹೇಗಾಗುತ್ತದೆಂದು ಪ್ರಶ್ನಿಸಿದ್ದಾರೆ. ಇದು ಏಕಾಯಿತು ಎಂಬ ಬಗ್ಗೆ ಪತ್ತೆಹಚ್ಚುತ್ತಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಪ್ರಾಂಶುಪಾಲೆ ರೇಣುಕಾ ಬಾಲಾಜಿ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments