Webdunia - Bharat's app for daily news and videos

Install App

500, 1000 ನೋಟು ಬದಲಿಸಲು 50 ದಿನವಷ್ಟೇ ಕಾಲಾವಕಾಶ

Webdunia
ಬುಧವಾರ, 9 ನವೆಂಬರ್ 2016 (08:14 IST)
ನವದೆಹಲಿ: ನಿನ್ನೆ ಮಧ್ಯ ರಾತ್ರಿಯಿಂದಲೇ 500, 1000 ರೂ. ಚಲಾವಣೆ ಬಂದ್ ಮಾಡಿರುವ ಕುರಿತು ಪ್ರಧಾನಿ ಮೋದಿ ಹೇಳಿದ್ದರೂ, ಈಗಾಗಲೇ ಆ ಮುಖ ಬೆಲೆಯ ಹಣ ಇಟ್ಟುಕೊಂಡವರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ಸಂಬಂಧಿಸಿ ಕೆಲವು ನಿಯಮಾವಳಿಗಳನ್ನು ಜಾರಿ ಮಾಡಲಾಗಿದ್ದು, ಒಂದಿಷ್ಟು ಗಮನಾರ್ಹ ಸಂಗತಿಗಳು ಇಲ್ಲಿವೆ.

*500, 1000 ರೂ. ನೋಟುಗಳ ಮುದ್ರಣ ಹಾಗೂ ಚಲಾವಣೆ ಮಂಗಳವಾರ ರಾತ್ರಿಯಿಂದಲೇ ಬಂದ್ ಆಗಿವೆ.


* ಕಪ್ಪು ಹಾಗೂ ಭಯೋತ್ಪಾನೆ ನಿಗ್ರಹಕ್ಕೆ ಕೇಂದ್ರ ಸರಕಾರ ಕೈಗೊಂಡಿರುವ ಕಠಿಣ ನಿರ್ಧಾರ. ಹಾಗೂ ಕಪ್ಪು ಹಣ ನಿಗ್ರಹಕ್ಕೆ ಕೊನೆಯ ಅಸ್ತ್ರ.
 
*ಈ ಮುಖ ಬೆಲೆಯ ನೋಟುಗಳನ್ನು ನೀಡಲು 50 ದಿನಗಳ ಗಡವು‌.
 
* ಬ್ಯಾಂಕ್, ಪೋಸ್ಟ್ ಹಾಗೂ, ಪೆಟ್ರೋಲ್ ಬಂಕ್ ಹಾಗೂ ಕೇಂದ್ರ ಸರಕಾರದ ಕಚೇರಿಗಳಲ್ಲಿ ಹಣ ಬದಲಾಯಿಸಿಕೊಳ್ಳಲು ಅವಕಾಶ.
 
*ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಗುರುತಿನ ಪತ್ರ ನೀಡಿ ನೋಟುಗಳನ್ನು ವಾಪಸ್ ಮಾಡಿಕೊಳ್ಳಬೇಕು.
 
-*ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ
 
*ಇಂದು ಮತ್ತು ನಾಳೆ(09, 10) ದೇಶಾದ್ಯಂತ ಯಾವುದೇ ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ.
 
*ಇಂದು, ನಾಳೆ ಎಟಿಎಂಗೆ ಹೋದರೂ ಹಣ ದೊರೆಯುವುದಿಲ್ಲ.
 
*500, 1000 ರೂ.ಗಳನ್ನು ಆಸ್ಪತ್ರೆ ಹಾಗೂ ವಿಮಾನ, ರೇಲ್ವೆ ಪ್ರಯಾಣಕ್ಕೆ ನವೆಂಬರ್ 11 ರವರೆಗೆ ಬಳಸಬಹುದು.
 
*ಬ್ಯಾಂಕ್​ನಲ್ಲಿ ನಗದು ರಹಿತ ವಹಿವಾಟು ಹಾಗೂ ವ್ಯವಹಾರಕ್ಕೆ ಯಾವುದೇ ತೊಂದರೆ ಇಲ್ಲ
 
*ನೋಟು ವಾಪಸ್ ನೀಡಲು ಡಿಸೆಂಬರ್ 30  ಕೊನೆಯ ದಿನ.
 
*ಇಂದಿನಿಂದ 100, 50, 20, 10, 5 ರೂ.  ವ್ಯವಹಾರ ಮಾತ್ರ ಮಾತ್ರ ಕಾನೂನುಬದ್ಧ
 
*500, 1000 ರೂ. ನೋಟುಗಳಿಗೆ ಇನ್ನು ಮುಂದೆ ಯಾವುದೇ ಮಾನ್ಯತೆ ಇಲ್ಲ.
 
* ನವೆಂಬರ್ 11ರಿಂದ  ಎಟಿಎಂನಲ್ಲಿ ಪ್ರತಿದಿನ 2 ಸಾವಿರ ರೂ. ಮಾತ್ರ ಹೊರ ತೆಗೆಯಬಹುದು.
 
* ಇಂದು ಎಲ್ಲ ಬ್ಯಾಂಕ್​ಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
 
*2 ಸಾವಿರ ನೋಟು ಚಲಾವಣೆಗೆ ಆರ್​ಬಿಐ ನಿಂದ ಈಗಾಗಲೇ ಒಪ್ಪಿಗೆ ದೊರೆತಿದೆ.
 
*ಮುಂದಿನ ದಿನಗಳಲ್ಲಿ ಮತ್ತೆ 500 ಹಾಗೂ 2000 ನೋಟು ಬರಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments