Select Your Language

Notifications

webdunia
webdunia
webdunia
webdunia

ಕೌಟಂಬಿಕ ಕಲಹದಿಂದ ಬೇಸತ್ತು 14 ಮಂದಿಯನ್ನು ಹತ್ಯೆ ಮಾಡಿ ನೇಣಿಗೆ ಶರಣಾದ ಆರೋಪಿ

ಕೌಟಂಬಿಕ ಕಲಹದಿಂದ ಬೇಸತ್ತು 14 ಮಂದಿಯನ್ನು ಹತ್ಯೆ ಮಾಡಿ ನೇಣಿಗೆ ಶರಣಾದ ಆರೋಪಿ
ಮುಂಬೈ , ಭಾನುವಾರ, 28 ಫೆಬ್ರವರಿ 2016 (11:15 IST)
ನಗರದ ಠಾಣೆ ಪ್ರದೇಶದಲ್ಲಿ ಕೌಟಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ 14 ಮಂದಿಯನ್ನು ಬೀಕರವಾಗಿ ಹತ್ಯೆಗೈದ ಘಟನೆ ಕಾಸರ್‌ವಡವಲಿಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿ ಹಸನ್ ಪರೇಕರ್  ದಿನನಿತ್ಯ ಕುಟುಂಬದೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸರಗೊಂಡು ಚಾಕುವಿನಿಂದ ತನ್ನದೇ ಆದ ಏಳು ಮಕ್ಕಳು ಮತ್ತು ಆರು ಜನ ಮಹಿಳೆಯರನ್ನು ಹತ್ಯೆ ಮಾಡಿ ನಂತರ ತಾನೂ ಕೂಡಾ ನೇಣಿಗೆ ಶರಣಾದ ಹೇಯ ಘಟನೆ ವರದಿಯಾಗಿದೆ.
 
ಘಟನೆಯಲ್ಲಿ ಒಬ್ಬ ಮಹಿಳೆಗೆ ತೀವ್ರವಾದ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada