ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಖಂಡನೆಗೆ ಗುರಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಸುಮ್ಮನಿರುವ ಲಕ್ಷಣಗಳೇ ಕಾಣುತ್ತಿಲ್ಲ.
ತಮ್ಮ ಹೇಳಿಕೆಯನ್ನು ಸಾಬೀತು ಪಡಿಸಲು ಸದ್ಯದಲ್ಲಿಯೇ ಪತ್ರಿಕಾಗೋಷ್ಠಿ ನಡೆಸುವುದಾಗಿ ಅಲ್ವಾರ್ ಜಿಲ್ಲೆ ರಾಮಗಢದ ಶಾಸಕ ಜ್ಞಾನದೇವ ಅಹುಜಾ ಹೇಳಿದ್ದಾರೆ.
ಫೆಬ್ರವರಿ 22 ರಂದು ಅಲ್ವಾರ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಹುಜಾ, ಜೆಎನ್ಯು ಆವರಣದಲ್ಲಿ 2,000 ಲಿಕ್ಕರ್ ಬಾಟಲಿ, 10,000 ಸಿಗರೇಟ್, 4,000 ಬಿಡಿ ತುಂಡುಗಳು, 50,000 ಎಲುಬಿನ ಚೂರುಗಳು, 2,000 ಚಿಪ್ಸ್ ಕವರ್ ಮತ್ತು 3,000 ಬಳಸಿದ ಕಾಂಡೋಮ್ಗಳು ಪತ್ತೆಯಾಗಿವೆ ಎಂದು ಹೇಳಿದ್ದರು.
ಇದನ್ನು ಖಂಡಿಸಿ ಸಂಸತ್ ಕಲಾಪದ ಮೊದಲನೆಯ ದಿನ ರಾಜ್ಯಪಾಲರು ಮಾತನಾಡುತ್ತಿದ್ದಾಗ ಕಾಂಗ್ರೆಸ್ ಅಹುಜಾ ವಿರುದ್ಧ ಘೋಷಣೆಯನ್ನು ಕೂಗಿತ್ತು.