Webdunia - Bharat's app for daily news and videos

Install App

379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?

Webdunia
ಬುಧವಾರ, 19 ಜುಲೈ 2017 (10:23 IST)
ನವದೆಹಲಿ: ನಮ್ಮ ದೇಶದಲ್ಲಿ ಕೋರ್ಟ್ ವಿಚಾರಣೆಗಳು ಬೇಗನೇ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಂತೂ ಕೇವಲ 379 ರೂ.ಗಳ ಕಳ್ಳತನ ಪ್ರಕರಣ ಬರೋಬ್ಬರಿ 29 ವರ್ಷ ವಿಚಾರಣೆ ನಡೆಸಿದೆ. ಕೊನೆಗೆ ಆರೋಪಿಗಳಿಗೆ ಬರೇಲಿಯ ನ್ಯಾಯಾಲಯ ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಅಂದು 30 ರ ತರುಣರಾಗಿದ್ದ ಆರೋಪಿಗಳು ಇಂದು 60 ವರ್ಷದ ಮುದುಕರಾಗಿದ್ದಾರೆ. 1988 ರಲ್ಲಿ ಈ ಘಟನೆ ನಡೆದಿತ್ತು. ವಾಜಿದ್ ಹುಸೇನ್ ಎಂಬಾತನಿಗೆ ಮತ್ತು ಬರಿಸುವ ಚಹಾ ನೀಡಿ ಚಂದ್ರ ಪಾಲ್, ಕನ್ಹಯ್ಯಾ ಲಾಲ್ ಮತ್ತು ಸರ್ವೇಶ್ ಎಂಬವರು 379 ರೂ. ಎಗರಿಸಿದ್ದರು. ಇವರಲ್ಲಿ ಚಂದ್ರಪಾಲ್ ಎಂಬಾತ 2004 ರಲ್ಲಿ ಸಾವನ್ನಪ್ಪಿದ್ದ.

ನಂತರ ಈ ಪ್ರಕರಣ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಬದುಕುಳಿದಿರುವ ಕನ್ಹಯ್ಯಾ ಮತ್ತು ಸರ್ವೇಶ್ 60 ವರ್ಷದ ವೃದ್ಧರಾಗಿದ್ದಾರೆ. ತಮ್ಮ ಯೌವನದ ದಿನಗಳಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೇನಂತೆ? ಇದೀಗ ಇಬ್ಬರೂ ಆರೋಪಿಗಳು 10 ಸಾವಿರ ರೂ. ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಇದನ್ನೂ ಓದಿ..  ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಯಲ್ಲಿ ಕಳ್ಳತನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

19ಮಾಜಿ ಮಂತ್ರಿಗಳ ಭದ್ರತೆ ಕೈಬಿಟ್ಟ ಗೃಹ ಸಚಿವಾಲಯ, ಆದರೆ ಸ್ಮೃತಿ ಇರಾನಿಗೆ ಯಾಕೆ ಈ ವಿಶೇಷತೆ

ಛತ್ತೀಸ್‌ಗಢ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಹಿಳಾ ಮಾವೋವಾದಿ ಹತ್ಯೆ

ಮದ್ಯದ ಬೆಲೆ ಕೇಳಿಯೇ ನಶೆ ಏರುವಂತಾಗಿದೆ: ಬಿಜೆಪಿ ವ್ಯಂಗ್ಯ

Suhas Shetty Case: ಹತ್ಯೆ ಹಿಂದೆ ಬಜ್ಪೆ ಹೆಡ್‌ ಕಾನ್‌ಸ್ಟೇಬಲ್‌ ಭಾಗಿಯಾಗಿರುವ ಶಂಕೆ

Suhas Shetty Case: ಯುಟಿ ಖಾದರ್ ಸ್ಪೀಕರ್‌ ಆಗಿರುವವರೆಗೆ ಸಾವಿಗೆ ನ್ಯಾಯ ಸಿಗುವ ನಂಬಿಕೆಯಿಲ್ಲ

ಮುಂದಿನ ಸುದ್ದಿ
Show comments