Webdunia - Bharat's app for daily news and videos

Install App

379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?

Webdunia
ಬುಧವಾರ, 19 ಜುಲೈ 2017 (10:23 IST)
ನವದೆಹಲಿ: ನಮ್ಮ ದೇಶದಲ್ಲಿ ಕೋರ್ಟ್ ವಿಚಾರಣೆಗಳು ಬೇಗನೇ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಂತೂ ಕೇವಲ 379 ರೂ.ಗಳ ಕಳ್ಳತನ ಪ್ರಕರಣ ಬರೋಬ್ಬರಿ 29 ವರ್ಷ ವಿಚಾರಣೆ ನಡೆಸಿದೆ. ಕೊನೆಗೆ ಆರೋಪಿಗಳಿಗೆ ಬರೇಲಿಯ ನ್ಯಾಯಾಲಯ ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಅಂದು 30 ರ ತರುಣರಾಗಿದ್ದ ಆರೋಪಿಗಳು ಇಂದು 60 ವರ್ಷದ ಮುದುಕರಾಗಿದ್ದಾರೆ. 1988 ರಲ್ಲಿ ಈ ಘಟನೆ ನಡೆದಿತ್ತು. ವಾಜಿದ್ ಹುಸೇನ್ ಎಂಬಾತನಿಗೆ ಮತ್ತು ಬರಿಸುವ ಚಹಾ ನೀಡಿ ಚಂದ್ರ ಪಾಲ್, ಕನ್ಹಯ್ಯಾ ಲಾಲ್ ಮತ್ತು ಸರ್ವೇಶ್ ಎಂಬವರು 379 ರೂ. ಎಗರಿಸಿದ್ದರು. ಇವರಲ್ಲಿ ಚಂದ್ರಪಾಲ್ ಎಂಬಾತ 2004 ರಲ್ಲಿ ಸಾವನ್ನಪ್ಪಿದ್ದ.

ನಂತರ ಈ ಪ್ರಕರಣ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಬದುಕುಳಿದಿರುವ ಕನ್ಹಯ್ಯಾ ಮತ್ತು ಸರ್ವೇಶ್ 60 ವರ್ಷದ ವೃದ್ಧರಾಗಿದ್ದಾರೆ. ತಮ್ಮ ಯೌವನದ ದಿನಗಳಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೇನಂತೆ? ಇದೀಗ ಇಬ್ಬರೂ ಆರೋಪಿಗಳು 10 ಸಾವಿರ ರೂ. ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಇದನ್ನೂ ಓದಿ..  ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಯಲ್ಲಿ ಕಳ್ಳತನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments