Webdunia - Bharat's app for daily news and videos

Install App

ದೇಶದ ಈ 29 ನಗರಗಳಲ್ಲಿ ಯಾವಾಗ ಬೇಕಾದರೂ ಭೂಕಂಪವಾಗಬಹುದು..!

Webdunia
ಸೋಮವಾರ, 31 ಜುಲೈ 2017 (09:53 IST)
ದೆಹಲಿ ಮತ್ತು 9 ರಾಜ್ಯಗಳ ರಾಜಧಾನಿಗಳು ಸೇರಿ ದೇಶದ 29 ನಗರಗಳು ಮತ್ತು ಪಟ್ಟಣಗಳು ತೀವ್ರ ಮತ್ತು ಅತೀ ತೀವ್ರ ಭೂಕಂಪ ವಲಯಗಳ ಸಾಲಿಗೆ ಸೇರಿವೆ ಎಂದು ಸೈಸ್ಮಾಲಜಿ ನ್ಯಾಷನಲ್ ಸೆಂಟರ್ (NCS) ಹೇಳಿದೆ.
 

ಇವುಗಳಲ್ಲಿ ಬಹುತೇಕ ನಗರಗಳು ಹಿಮಾಲಯದ ತಪ್ಪಲಿನಲ್ಲಿರುವುದು ವಿಶೇಷ. ಹಿಮಾಲಯ ತಪ್ಪಲು ವಿಶ್ವದ ಅತ್ಯಂತ ಅಪಾಯಕಾರಿ ಭೂಕಂಪ ವಲಯವಾಗಿದೆ ಎಂದು ಎನ್`ಸಿಎಸ್ ಹೇಳಿದೆ.ದೆಹಲಿ, ಪಾಟ್ನಾ (ಬಿಹಾರ), ಶ್ರೀನಗರ (ಜಮ್ಮು ಮತ್ತು ಕಾಶ್ಮೀರ), ಕೊಹಿಮಾ (ನಾಗಾಲ್ಯಾಂಡ್), ಪುದುಚೇರಿ, ಗೌಹಾತಿ (ಅಸ್ಸಾಂ), ಗ್ಯಾಂಗ್ಟಾಕ್ (ಸಿಕ್ಕಿಂನ), ಶಿಮ್ಲಾ (ಹಿಮಾಚಲ ಪ್ರದೇಶ), ದೆಹ್ರಾದೂನ್ (ಉತ್ತರಾಖಂಡ್) ಇಂಫಾಲ್ (ಮಣಿಪುರ) ಮತ್ತು ಚಂಡೀಘಢ ನಗರಗಳು ತೀವ್ರ ಮತ್ತು ಅತೀ ತೀವ್ರ ಭೂಕಂಪ ವಲಯದ ಸಾಲಿನಲ್ಲಿ ಬರುತ್ತಿವೆ.


ಭೂಮಿ ಒಳಗಿನ ರಾಸಾಯನಿಕ ಚಟುವಟಿಕೆ ಆಧಾರದ ಮೇಲೆ ದಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ವತಿಯಿಂದ ಈ ಗ್ರೇಡ್ ನೀಡಲಾಗುತ್ತದೆ ಎಂದು ಎನ್`ಸಿಎಸ್ ನಿರ್ದೇಶಕ ವಿನೀತ್ ಗೌಹ್ಲಾಟ್ ತಿಳಿಸಿದ್ದಾರೆ.


ಸಂಪೂರ್ಣ ಈಶಾನ್ಯ ಭಾರತ, ಜಮ್ಮು ಮತ್ತು ಕಾಶ್ಮೀರದ ಭಾಗಗಳು, ಹಿಮಾಚಲಪ್ರದೇಶ, ಉತ್ತರಾಖಂಡ್, ಗುಕರಾತ್`ನ ಕಛ್, ಉತ್ತರ ಬಿಹಾರ,ಅಂಡಮಾನ್ ನಿಕೋಬರ್ ದ್ವೀಪಗಳು ತೀವ್ರ ಚಟುವಟಿಕೆಯ ಭೂಕಂಪನ ವಲಯದಲ್ಲಿದ್ದರೆ. ಜಮ್ಮುವಿನ ಕೆಲಭಾಗಗಳು, ದೆಹಲಿ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರದ ಸ್ವಲ್ಪ ಭಾಗ ಅತಿ ತೀವ್ರ ಭೂಕಂಪ ವಲಯಗಳ ಸಾಲಿಗೆ ಸೇರಿವೆ. 31 ಹೊಸ ನಗರಗಳ ಭುಕಂಪನ ಮಾಪನದ ವರದಿ ಮಾರ್ಚ್`ಗೆ ಲಭ್ಯವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಹೇಳಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣದ ಯಾವುದೇ ನಗರಗಳ ಹೆಸರಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments