Select Your Language

Notifications

webdunia
webdunia
webdunia
webdunia

ಮಗಳ ಎದುರೇ ಅಳಿಯನನ್ನ ಕೊಂದು ಸುಟ್ಟು ಹಾಕಿದ ಮಾವ..!

ಮಗಳ ಎದುರೇ ಅಳಿಯನನ್ನ ಕೊಂದು ಸುಟ್ಟು ಹಾಕಿದ ಮಾವ..!
ಹೈದ್ರಾಬಾದ್ , ಭಾನುವಾರ, 28 ಮೇ 2017 (18:57 IST)
ಪೋಷಕರ ವಿರೋಧದ ನಡುವೆಯೂ ಮೇಲ್ಜಾತಿಯ ಯುವತಿಯನ್ನ ವಿವಾಹವಾಗಿದ್ದ ಯುವಕನನ್ನ ಕೊಂದು ಸುಟ್ಟು ಹಾಕಿರುವ ಘಟನೆ ಹೈದ್ರಾಬಾದ್`ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಿಂಗಳಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕುತ್ತಿದ್ದ ಪೋಷಕರಿಗೆ ಪೊಲೀಸರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
 

20 ವರ್ಷದ ಪತ್ನಿ ತುಮ್ಮಲ ಸ್ವಾತಿ ಫೋನ್`ನಿಂದ ಪತಿ ಅಂಬೋಜಿ ರಮೇಶ್`ಗೆ ಬಲವಂತವಾಗಿ ಕರೆ ಮಾಡಿಸಿದ ಸ್ವಾತಿ ತಂದೆ ಶ್ರೀನಿವಾಸ ರೆಡ್ಡಿ, ಮೈದಾನಕ್ಕೆ ಕರೆಸಿಕೊಂಡು ಸೊದರರ ನೆರವಿನೊಂದಿಗೆ ಸ್ವಾತಿ ಎದುರಲ್ಲೇ ನರೇಶ್`ನನ್ನ ಕೊಂದು ಸುಟ್ಟು ಹಾಕಿದ್ದಾನೆ.

`ನರೇಶ್ ನಾಪತ್ತೆ ಬಗ್ಗೆ ಸ್ವಾತಿ ತಂದೆ ಶ್ರೀನಿವಾಸ್ ಮೇಲೆ ಅನುಮಾನವಿತ್ತು. ತನಿಖೆ ವೇಳೆ ಶ್ರೀನಿವಾಸ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2 ತಿಂಗಮಹತ್ಯೆಳ ಹಿಂದೆ ನರೇಶ್ ಮುಂಬೈನಲ್ಲಿ ಸ್ವಾತಿಯನ್ನ ವಿವಾಹವಾಗಿದ್ದ. ಬಳಿಕ ದಂಪತಿಯನ್ನ ಪುಸಲಾಯಿಸಿ ಕರೆಸಿಕೊಂಡ ಪೋಷಕರು ನರೇಶ್ ಹತ್ಯೆಗೈದಿದ್ದಾರೆ. ಕೆಲ ದಿನಗಳ ಬಳಿಕ ಸ್ವಾತಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಕೊಳಕು ಯುದ್ಧವನ್ನು ಎದುರಿಸುತ್ತಿದೆ; ಇದನ್ನು ಆವಿಷ್ಕಾರಿ ರೀತಿಯಲ್ಲೇ ಎದುರಿಸಬೇಕು: ಜನರಲ್ ಬಿಪಿನ್ ರಾವತ್