ಗಾಂಧಿ ಜಯಂತಿಯ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಗಳಿಗೆಯಲ್ಲೇ ಸ್ವಚ್ಛತೆಗಾಗಿ ಪ್ರತಿ ಗ್ರಾಮಕ್ಕೆ ವಾರ್ಷಿಕ 20 ಲಕ್ಷ ರೂ. ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಈ ಅನುದಾನವನ್ನು ಬಳಸಬೇಕೆಂದು ಗಡ್ಕರಿ ಹೇಳಿದರು.
ದೇಶದ ಎಲ್ಲಾ ಗ್ರಾಮಗಳಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ನುಡಿದರು. 2019 ಅಕ್ಟೋಬರ್ 2ರೊಳಗೆ ಸ್ವಚ್ಛ ಭಾರತ ಗುರಿಯನ್ನು ಸಾಧಿಸಲು ಗಡ್ಕರಿ ಈ ನಿರ್ಧಾರ ಕೈಗೊಂಡರು.ಸ್ವಚ್ಛ ಭಾರತ ಅಭಿಯಾನ ಬರೀ ಸರ್ಕಾರದ ಕಾರ್ಯಕ್ರಮವಲ್ಲ.
ಅದನ್ನು ಯಶಸ್ವಿಯಾಗಿಸಲು ಪ್ರತಿಯೊಬ್ಬ ಭಾರತೀಯನ ಪಾಲ್ಗೊಳ್ಳುವಿಕೆ ಅವಶ್ಯಕ. ಸ್ವಚ್ಛತಾ ಉದ್ದೇಶಕ್ಕೆ ಮಂಜೂರಾಜ ಹಣವನ್ನು ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಇರಿಸಲಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ತಾಜ್ಯ ಬಳಕೆಗೆ ಉನ್ನತ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದು ನುಡಿದರು.