ಗಾಂಧಿನಗರ: ಭಾರತದ ಜನತೆ 1977ರಲ್ಲಿ ತುರ್ತುಪರಿಸ್ಥಿತಿ ನಂತರ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆದ ರೀತಿಯಲ್ಲಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುತ್ತಾರೆಂದು ನರೇಂದ್ರ ಮೋದಿ ಆಶಾವಾದ ವ್ಯಕ್ತಪಡಿಸಿದ್ದಾರೆ. 2014ರ ಚುನಾವಣೆ ಫಲಿತಾಂಶವು 1977ರ ಚುನಾವಣೆ ಫಲಿತಾಂಶದ ಪುನರಾವರ್ತನೆಯಾಗಲಿದೆ ಎಂದು ಅವರು ಆಶಿಸಿದರು.
ಯುಪಿಎಯನ್ನು 9 ವರ್ಷಗಳ ಆಡಳಿತಕ್ಕೆ ಉತ್ತರದಾಯಿಯಾಗಿ ಮಾಡುವ ಕಾಲ ಈಗ ಕೂಡಿಬಂದಿದೆ. ಕಳೆದ 9 ವರ್ಷಗಳಲ್ಲಿ ಏನು ಮಾಡಿದೆ ಎಂದು ಯುಪಿಎ ಸರ್ಕಾರ ಜನತೆಗೆ ಉತ್ತರ ನೀಡಬೇಕಾಗಿದೆ. ಇದಾದ ತಕ್ಷಣವೇ ಮೋದಿ ಗುಜರಾತಿನಲ್ಲಿ ಏನು ಮಾಡಿದ್ದಾರೆಂದು ಅವರು ಕೇಳುತ್ತಾರೆ. ಇದಕ್ಕೆ ಡಿಸೆಂಬರ್ 2012ರಲ್ಲಿಯೇ ನಾನು ಉತ್ತರ ನೀಡಿದ್ದೇನೆ.