Webdunia - Bharat's app for daily news and videos

Install App

೧೩೦ ಕೋಟಿ ಜನರು ಶೇ. ೧೪ರಷ್ಟೇ ಹಣ ಅವಲಂಬಿಸಬೇಕಿದೆ...

Webdunia
ಬುಧವಾರ, 9 ನವೆಂಬರ್ 2016 (08:53 IST)
ನವದೆಹಲಿ: ಕಪ್ಪು ಹಣ ಹಾಗೂ ನಕಲಿ ಹಣಗಳ ಹಾವಳಿ ತಡೆಯುವ ಉದ್ದೇಶದಿಂದ ಕೇಂದ್ರ ಸರಕಾರ ೫೦೦, ೧೦೦೦ ಮುಖಬೆಲೆಯ ನೋಟುಗಳನ್ನು ನಿನ್ನೆ ಮಧ್ಯ ರಾತ್ರಿಯಿಂದಲೇ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಷ್ಟು ಹಣಗಳು ಚಲಾವಣೆಯಾಗುತ್ತಿವೆ ಎನ್ನುವ ಕುರಿತು ಅಂಕಿ ಅಂಶಗಳ ಪಟ್ಟಿ ಇಲ್ಲಿದೆ... 

 
ಸದ್ಯ ಭಾರತದಲ್ಲಿ ಚಲಾವಣೆಯಲ್ಲಿ ಒಟ್ಟು ನೋಟುಗಳ ಮೌಲ್ಯ 16,41,500 ಲಕ್ಷ ಕೋಟಿ. ಅದರಲ್ಲಿ 500 ಮತ್ತು 1000 ನೋಟುಗಳ ಪ್ರಮಾಣ ಶೇ.86 ರಷ್ಟಿದೆ.
 
500, 1000 ರೂ . ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದ ದೇಶದಲ್ಲಿನ 130 ಕೋಟಿ ಜನರು ಈಗ ಚಲಾವಣೆಯಲ್ಲಿರುವ ೫, ೧೦, ೨೦, ೫೦ ಹಾಗೂ ೧೦೦ ರೂ  ಮುಖಬೆಲೆಯ ಶೇ.14ರಷ್ಟು ಮೌಲ್ಯದ ಹಣವನ್ನೇ ಅವಲಂಬಿಸಬೇಕಾಗಿದೆ. ಆದರೆ ೨೦೦೦ ಮುಖಬೆಲೆಯ ನೋಟುಗಳು ಎರಡು ದಿನಗಳಲ್ಲಿ ಚಲಾವಣೆಗೆ ಬರಲಿವೆ ಎನ್ನಲಾಗುತ್ತಿದೆ. 
 
ಒಂದು ಸಾವಿರ ರೂಪಾಯಿಯ  ಒಂದು ನೋಟು ಮುದ್ರಿಸಲು ಕನಿಷ್ಠ 3 ರೂಪಾಯಿ ವೆಚ್ಚವಾಗುತ್ತದೆ. ದೇಶದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 16,41,50000000000000000.  ಸ್ವಾತಂತ್ರ್ಯಾಪೂರ್ವದಲ್ಲಿ 1938 ರಲ್ಲಿ 10,000 ನೋಟು ಚಲಾವಣೆಗೆ ತಂದು 1946ರಲ್ಲಿ ಹಿಂಪಡೆಯಲಾಗಿತ್ತು. 1954ರಲ್ಲಿ ಮತ್ತೆ 10,000 ನೋಟು ಚಲಾವಣೆಗೆ ತಂದು 1978ರಲ್ಲಿ ಹಿಂದಕ್ಕೆ ಪಡೆಯಲಾಗಿತ್ತು. ಸದ್ಯಕ್ಕೆ ಚಲಾವಣೆಗೆ ಬರುತ್ತದೆ ಎನ್ನಲಾಗುತ್ತಿರುವ 2000 ನೋಟೇ ಅತಿ ಗರಿಷ್ಠ ಮೊತ್ತದ್ದಾಗಿದೆ.
 
ಈಗ 500, 1000 ರದ್ದು ಮಾಡಿರುವುದರಿಂದ 100 ರೂಪಾಯಿಯೇ ಗರಿಷ್ಠ ಮೊತ್ತದ್ದಾಗಿದೆ. ಕಡಿಮೆ ಮೊತ್ತದ ನೋಟು ಮುದ್ರಿಸಿದಷ್ಟೂ ಮುದ್ರಣವೆಚ್ಚ ಹೆಚ್ಚುತ್ತದೆ. ಒಟ್ಟಾರೆ ೫೦೦ ಹಾಗೂ ೧೦೦೦ ಮುಖಬೆಲೆಯ ನೋಟುಗಳು  ಇಂದಿನಿಂದ ಬಂದ್ ಆಗಿದ್ದು ಮೂರ್ನಾಲ್ಕು ದಿನಗಳ ವರೆಗೆ ಸ್ವಲ್ಪ ಸಮಸ್ಯೆಯನ್ನು ಎದುರಿಸಲೇ ಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

ವಿಮಾನ ದುರಂತ ಬೆನ್ನಲ್ಲೇ ಏರ್‌ಇಂಡಿಯಾದ 3 ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಜಿಸಿಎ

Video: ತಮಿಳುನಾಡು ಗವರ್ನರ್ ರವಿ ವಯಸ್ಸು 70 ದಾಟಿದ್ರೂ ಏನು ಎನರ್ಜಿ

ಮುಂದಿನ ಸುದ್ದಿ
Show comments