Webdunia - Bharat's app for daily news and videos

Install App

13 ವರ್ಷದ ಪುತ್ರಿಯ ಕನ್ಯತ್ವ ಹರಾಜಿಗಿಟ್ಟ ತಾಯಿ ಪೊಲೀಸ್ ವಶಕ್ಕೆ

Webdunia
ಸೋಮವಾರ, 31 ಮಾರ್ಚ್ 2014 (15:27 IST)
ನಗರದ ಬಾಂದ್ರಾ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು 13 ವರ್ಷ ವಯಸ್ಸಿನ ಪುತ್ರಿಯ ಕನ್ಯತ್ವವನ್ನು 1 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಪೊಲೀಸರ ಅತಿಥಿಯಾಗಿದ್ದಾಳೆ.

ಮಹಿಳೆಯೊಬ್ಬಳು ತನ್ನ ಪುತ್ರಿಯ ಕನ್ಯತ್ವ ಮಾರಾಟ ಮಾಡಲು ಯತ್ನಿಸುತ್ತಿದ್ದಾಳೆ ಎನ್ನುವ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತರು ಠಾಣೆ ಅಪರಾಧ ವಿಭಾಗದ ಪೊಲೀಸರ ನೆರವಿನಿಂದ ಬಾಲಕಿಯನ್ನು ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ: ಅಟೋದಲ್ಲಿ ಸಾಮಾಜಿಕ ಕಾರ್ಯಕರ್ತನೊಬ್ಬ ಪ್ರಯಾಣಿಸುತ್ತಿದ್ದ. ಪ್ರಯಾಣಿಕನೊಂದಿಗೆ ಮಾತಿಗಿಳಿದ ಅಟೋ ಚಾಲಕ ಕನ್ಯತ್ವ ಮಾರಾಟಕ್ಕಿರುವ ಬಾಲಕಿಯ ಬಗ್ಗೆ ನನಗೆ ತಿಳಿದಿದೆ. ನಿಮಗೆ ಬಾಲಕಿ ಬೇಕಾದಲ್ಲಿ ನಾನು ನೆರವು ನೀಡುತ್ತೇನೆ ಎಂದು ಹೇಳಿದ. ಅಟೋ ಚಾಲಕನ ಮಾತಿನಿಂದ ಸಾಮಾಜಿಕ ಕಾರ್ಯಕರ್ತ ಆಘಾತಗೊಂಡರೂ ಮೇಲ್ನೋಟಕ್ಕೆ ತೋರ್ಪಡಿಸದೆ ಆತನ ಮೊಬೈಲ್ ಸಂಖ್ಯೆಯನ್ನು ಪಡೆದು ಹಾರ್ಮೋನಿ ಫೌಂಡೇಶನ್‌ಗೆ ತೆರಳಿದ.

ಹಾರ್ಮೋನಿ ಫೌಂಡೇಶನ್‌ನ ಮುಖ್ಯಸ್ಥ ಡಾ.ಅಬ್ರಾಹಂ ಮಥಾಯಿ ಅವರನ್ನು ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತ ಸಂಪೂರ್ಣ ಮಾಹಿತಿ ನೀಡಿದ. ಆರೋಪಿಗಳನ್ನು ಶಿಕ್ಷಿಸಬೇಕು ಎನ್ನುವ ಉದ್ದೇಶದೊಂದಿಗೆ ತಂತ್ರವನ್ನು ರೂಪಿಸಿದರು.

ಸಾಮಾಜಿಕ ಕಾರ್ಯಕರ್ತ ಅಟೋಚಾಲಕನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಬಾಲಕಿಯ ಬಗ್ಗೆ ಮಾಹಿತಿ ನೀಡು ಎಂದು ಕೇಳಿದ. ಮುಂಬ್ರಾದಲ್ಲಿರುವ ಮನೆಯಲ್ಲಿ ಬಾಲಕಿಯಿದ್ದು, ಒಂದು ರಾತ್ರಿಗೆ 3 ಲಕ್ಷ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಅಟೋ ಚಾಲಕ ವಿವರಣೆ ನೀಡಿದ..

ಬಾಲಕಿಯನ್ನು ಖರೀದಿಸುವವರು ತಮ್ಮ ಇಚ್ಚೆಗೆ ಅನುಸಾರವಾಗಿ ಅವಳೊಂದಿಗೆ ಲೈಂಗಿಕ ಸುಖ ಅನುಭವಿಸಬಹುದು. ಬಾಲಕಿ ಈಗ ತಾನೆ ಋತುಮತಿಯಾಗಿದ್ದು, 3 ದಿನಗಳ ನಂತ್ರ ಬಾಲಕಿಯನ್ನು ಕರೆದೊಯ್ಯಬಹುದು ಎಂದು ತಿಳಿಸಿದ.

ಬಾಲಕಿಯನ್ನು ಇತರರಿಗೆ ಮಾರಾಟ ಮಾಡಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಕಾರ್ಯಕರ್ತ, ಅಟೋಚಾಲಕನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಅಟೋಚಾಲಕ ಬಾಲಕಿಯ ಫೋಟೋ ತೋರಿಸಿ ಒಂದು ರಾತ್ರಿಗೆ 1 ಲಕ್ಷ ರೂ.ಕೊಟ್ಟರೂ ಸಾಕು ಎಂದು ರೇಟ್ ಕೂಡಾ ಇಳಿಸಲು ಸಿದ್ದವಾದ. ರವಿವಾರದಂದು ಸಾಮಾಜಿಕ ಕಾರ್ಯಕರ್ತನಿಗೆ ಕರೆ ಮಾಡಿದ ಅಟೋಚಾಲಕ ಬಾಲಕಿಯ ಋತುಮತಿ ದಿನಗಳು ಮುಕ್ತಾಯವಾಗಿದ್ದು, ಹಣ ಪಾವತಿಸಿ ಬಾಲಕಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ.

ಹಾರ್ಮೋನಿ ಫೌಂಡೇಸನ್‌ನ ಮುಖ್ಯಸ್ಥ ಡಾ.ಮಥಾಯಿ ಈ ಬಾರಿ ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾನಿರ್ದೇಶಕ ದೇವನ್ ಭಾರ್ತಿಯವರ ನೆರವು ಪಡೆಯಲು ನಿರ್ಧರಿಸಿದರು. ದೇವನ್ ಭಾರ್ತಿ, ಠಾಣೆ ಪೊಲೀಸ್ ವ್ಯಾಪ್ತಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಮಿಲಿಂದ್ ಭಾರಾಂಭೆ ಮತ್ತು ಅಪರಾಧ ವಿಭಾಗದ ಅಧಿಕಾರಿಗಳ ತಂಡವನ್ನು ರಚಿಸಿ ಆರೋಪಿಗಳನ್ನು ಹಿಡಿಯಲು ತಂತ್ರ ರೂಪಿಸಿದರು.

ರವಿವಾರದಂದು ಮಧ್ಯಾಹ್ನ ಸಾಮಾಜಿಕ ಕಾರ್ಯಕರ್ತ ಮತ್ತು ಆತನ ಸಹದ್ಯೋಗಿ ಮುಂಬ್ರಾದ ಕೌಸಾ ಪ್ರದೇಶದಲ್ಲಿ ಅಟೋ ಚಾಲಕನನ್ನು ಭೇಟಿ ಮಾಡಿ 10 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದರು. ಹಣ ಪಡೆದ ನಂತರ ಅಟೋ ಚಾಲಕ ಇಬ್ಬರನ್ನು ಬಾಲಕಿ ವಾಸವಾಗಿರುವ ಆರು ಅಂತಸ್ತಿನ ಫಾತಿಮಾ ಪ್ಯಾಲೆಸ್‌ಗೆ ಕರೆದುಕೊಂಡು ಹೋಗಿ ಬಾಲಕಿಯ ತಾಯಿಯನ್ನು ಭೇಟಿ ಮಾಡಿಸಿದ.

13 ವರ್ಷ ವಯಸ್ಸಿನ ಪುತ್ರಿಯನ್ನು ಇವತ್ತು ಕರೆದುಕೊಂಡು ಹೋಗಿ ನಾಳೆ ಮನೆಗೆ ತಂದುಬಿಡಬೇಕು. ಉಳಿದ 90 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಬಾಲಕಿಯ ತಾಯಿ ಒತ್ತಾಯಿಸಿದ್ದಾಳೆ. ಸಾಮಾಜಿಕ ಕಾರ್ಯಕರ್ತ ಕೂಡಲೇ ಪೊಲೀಸರಿಗೆ ಕರೆ ಮಾಡಿದಾಗ ಹತ್ತಿರದಲ್ಲೇ ಇದ್ದ ಪೊಲೀಸ್ ತಂಡ ಅಟೋ ಚಾಲಕ ಮತ್ತು ಬಾಲಕಿಯ ತಾಯಿಯನ್ನು ವಶಕ್ಕೆ ತೆಗೆದುಕೊಂಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ