Select Your Language

Notifications

webdunia
webdunia
webdunia
webdunia

100 ಕೋಟಿ ರೂ.ಗಳಿಗೆ ರಾಜ್ಯಸಭಾ ಸೀಟ್ ಸೇಲ್: ಕಾಂಗ್ರೆಸ್ ಎಂಪಿ

100 ಕೋಟಿ ರೂ.ಗಳಿಗೆ ರಾಜ್ಯಸಭಾ ಸೀಟ್ ಸೇಲ್: ಕಾಂಗ್ರೆಸ್ ಎಂಪಿ
, ಸೋಮವಾರ, 29 ಜುಲೈ 2013 (14:20 IST)
PTI
PTI
ನವದೆಹಲಿ: ನಿಮ್ಮ ಬಳಿ ನೂರು ಕೋಟಿ ರೂ.ಗಳಿದ್ದರೆ ನೀವು ರಾಜ್ಯಸಭೆ ಸದಸ್ಯರಾಗಬಹುದು. ಹರ್ಯಾಣ ಕಾಂಗ್ರೆಸ್ ಮುಖಂಡ ಬೀರೇಂದ್ರ ಸಿಂಗ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೀರೇಂದ್ರ ಸಿಂಗ್ ಅವರ ಹೇಳಿಕೆಯಿಂದ ರಾಜ್ಯಸಭೆಯ ಸ್ಥಾನ ಸೇಲ್‌ಗಿದೆಯೇ ಎಂಬ ಅನುಮಾನ ಹುಟ್ಟದಿರದು. 'ರಾಜ್ಯಸಭೆ ಸ್ಥಾನ ಪಡೆಯಲು ಯಾವ ಅರ್ಹತೆಯೂ ಬೇಡ. 100 ಕೋಟಿ ರೂ.ಗಳು ನಿಮ್ಮ ಬಳಿಯಿದ್ದರೆ ಸೀಟು ಖಚಿತ 'ಎಂದು ಬೀರೇಂದ್ರ ಸಿಂಗ್ ಸೋಮವಾರ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಬೀರೇಂದ್ರ ಸಿಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ವಿರುದ್ಧ ಟೀಕೆಗೆ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಇದು ಬಿಂಬಿಸುತ್ತದೆ ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವೇಡ್ಕರ್ ಟೀಕಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಇದು ಸಾಕ್ಷಿವೊದಗಿಸುತ್ತದೆ ಎಂದು ಅವರು ಆರೋಪಿಸಿದರು.

ಬೀರೇಂದ್ರ ಸಿಂಗ್ ಸ್ವಾನುಭವದಿಂದ ಈ ಮಾತು ಹೇಳಿದ್ದಾರಯೇ ಅಥವಾ ಬೇರೆಯವರ ಉದಾಹರಣೆ ತೆಗೆದುಕೊಂಡು ಹೇಳಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಈಗ ರಾಜ್ಯಸಭೆಗೆ ಉದ್ಯಮಕ್ಷೇತ್ರಗಳಲ್ಲಿ ತೊಡಗಿಕೊಂಡವರು ಆಯ್ಕೆಯಾಗುತ್ತಾರೆ. ಹಣದ ಬಲದಿಂದ ಇವರ ಆಯ್ಕೆ ನಡೆದಿರಬಹುದೆಂದು ಈಗ ಶಂಕಿಸಲಾಗುತ್ತಿದೆ. ರಾಜಕೀಯ ಪಕ್ಷಗಳಿಗೆ ಫಂಡ್ ನೀಡುವ ಸದಸ್ಯರನ್ನೇ ರಾಜ್ಯಸಭೆಗೆ ಆಯ್ಕೆ ಮಾಡುತ್ತಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

Share this Story:

Follow Webdunia kannada