Webdunia - Bharat's app for daily news and videos

Install App

ಬಿಹಾರ್ ವಿಧಾನಸಭೆ ಚುನಾವಣೆ: 1 ಕೋಟಿ ಮನೆಗಳಿಗೆ ಭೇಟಿ ನೀಡಲಿರುವ ನಿತೀಶ್ ಕುಮಾರ್

Webdunia
ಮಂಗಳವಾರ, 30 ಜೂನ್ 2015 (20:53 IST)
ಬಿಹಾರ್ ವಿಧಾನಸಭೆ ಚುನಾವಣೆ ಪ್ರಚಾರದ ಅಂಗವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ 10 ಸಾವಿರ ಬಡಾವಣೆಗಳಲ್ಲಿರುವ 1 ಕೋಟಿ ಮನೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ  
 
ವಿಧಾನಪರಿಷತ್ ಚುನಾವಣೆಯ ಅಂಗವಾಗಿ ಬಡ್ ಚಲಾ ಬಿಹಾರ್ ಎನ್ನುವ ಘೋಷಣೆಗೆ ಚುನಾವಣೆ ಆಯೋಗ ಬ್ರೆಕ್ ಹಾಕಿದ ನಂತರ ಇದೀಗ ಹರ್ ಘರ್ ದಸ್ತಕ್ ಎನ್ನುವ ಘೋಷಣೆಯಡಿಯಲ್ಲಿ ನಿತೀಶ್ ಕುಮಾರ್ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.  
 
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಚಾರದ ಹೊಣೆ ಹೊತ್ತುಕೊಂಡಿದ್ದ ಪ್ರಶಾಂತ್ ಕಿಶೋರ್, ಬಿಹಾರ್ ಸಿಎಂ ನಿತೀಶ್ ಕುಮಾರ್ ಪ್ರಚಾರದ ಹೊಣೆ ಹೊರಲಿದ್ದಾರೆ. 
 
ಮಾಧ್ಯಮಗಳ ಪ್ರಕಾರ, ಸಿಎಂ ನಿತೀಶ್ ಕುಮಾರ್ ಪ್ರಚಾರದಲ್ಲಿ ಹೈ-ಎಂಡ್ ತಂತ್ರಜ್ಞಾನವಾಗಲಿ, ಸಾಮಾಜಿಕ ಅಂತರ್ಜಾಲ ತಾಣವಾಗಲಿ, ಪಾಂಪ್ಲೆಟ್ ಕೂಡಾ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
 
ರಾಜ್ಯದಲ್ಲಿರುವ ಪ್ರತಿಯೊಬ್ಬರ ಮನೆಮನೆಗೆ ತೆರಳಿ ಪ್ರಚಾರ ಮಾಡುವುದರತ್ತ ಮಾತ್ರ ಗಮನಹರಿಸಲಾಗಿದೆ. ಪಾಟ್ನಾದಲ್ಲಿ ಪ್ರತಿಯೊಂದು ಮನೆಗೆ ಸಿಎಂ ನಿತೀಶ್ ಕುಮಾರ್ ತೆರಳಿದ್ದಾರೆ ಎಂದು ಜೆಡಿಯು ನಾಯಕರು ತಿಳಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments