‘ಗುಜರಾತ್ ಯೋಧರು ದೇಶಕ್ಕಾಗಿ ಹುತಾತ್ಮರಾದ ಉದಾಹರಣೆ ಇದೆಯೇ?’

Webdunia
ಗುರುವಾರ, 11 ಮೇ 2017 (10:00 IST)
ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಯೋಧರ ಬಗ್ಗೆ ಕೆದಕಿ ವಿವಾದಕ್ಕೀಡಾಗಿದ್ದಾರೆ.

 
‘ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದ ರಾಜ್ಯಗಳ ಯೋಧರು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗುತ್ತಾರೆ. ಆದರೆ ಗುಜರಾತ್ ಯೋಧರು ಯಾಕಿಲ್ಲ?’ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದು ಭಾರೀ ವಿವಾದಕ್ಕೀಡಾಗಿದೆ.

ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿಯೂ ರಾಷ್ಟ್ರೀಯತೆ ಮತ್ತು ವಂದೇ ಮಾತರಂ ಬಗ್ಗೆ ಮಾತನಾಡಿ ಅಖಿಲೇಶ್ ಟೀಕೆಗೊಳಗಾಗಿದ್ದರು. ಇದೀಗ ಯೋಧರ ಬಗ್ಗೆ ಮಾತನಾಡಿದ್ದಕ್ಕೆ ಟ್ವಿಟರ್ ನಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಿಸ್ಟರ್. ಅಖಿಲೇಶ್ ಸಾಹೇಬ್ರೇ, ಯೋಧರು ಯಾವುದೇ ಪ್ರದೇಶಕ್ಕೆ ಸೇರಿದವರಲ್ಲ. ಅವರು ಭಾರತೀಯರು. ಸದ್ಯ ನಿಮ್ಮನ್ನು ಎರಡನೇ ಬಾರಿಗೆ ಆರಿಸಲಿಲ್ಲವಲ್ಲ. ನಾವು ಬಚಾವಾದೆವು. ನಾಚಿಕೆಯಾಗಬೇಕು ನಿಮ್ಮ ಈ ಹೇಳಿಕೆಗೆ ಎಂದು ಜಾಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ ಬೆಲೆಯಲ್ಲಿ ಇಂದು ಇಳಿಕೆ

ಜವಹರಲಾಲ್ ನೆಹರೂ ದಾಖಲೆಗಳ ಪೆಟ್ಟಿಗೆಗಳು ಸೋನಿಯಾ ಗಾಂಧಿ ಬಳಿ: ಸಂಸತ್ ನಲ್ಲಿ ಸಚಿವ ಗಜೇಂದ್ರ ಸಿಂಗ್ ಬಾಂಬ್

ಮೋದಿ ಮನಸ್ಸು ಮಾಡಿದ್ರೆ ತುಳಿಯಬಹುದಿತ್ತು: ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸ್ಪೋಟಕ ಹೇಳಿಕೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಒಂದು ಮಂದಿರ ಕಟ್ಟಿಸಿದರೆ ಭಿಕ್ಷುಕರು ಹುಟ್ಟಿಕೊಳ್ತಾರೆ: ಹಿಂದೂಗಳ ಆಕ್ರೋಶಕ್ಕೆ ಕಾರಣವಾದ ಶಾಲೆ ಬರಹ

ಮುಂದಿನ ಸುದ್ದಿ
Show comments