Webdunia - Bharat's app for daily news and videos

Install App

‘ಸೋನಿಯಾ ಗಾಂಧಿ ಹಣವನ್ನು ಸಾಚಾ ಮಾಡುತ್ತಿದ್ದವರೇ ಪಿ. ಚಿದಂಬರಂ’

Webdunia
ಗುರುವಾರ, 18 ಮೇ 2017 (06:33 IST)
ನವದೆಹಲಿ: ಯುಪಿಎ ಅಧಿಕಾರವಧಿಯಲ್ಲಿ ಪಿ.ಚಿದಂಬರಂನಷ್ಟು ಭ್ರಷ್ಟ ಸಚಿವರು ಇನ್ಯಾರೂ ಇರಲಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 
‘ಯುಪಿಎ ಅಧಿಕಾರವಧಿಯಲ್ಲಿ ಚಿದಂಬರಂನಷ್ಟು ಭ್ರಷ್ಟ ಸಚಿವರು ಬೇರಾರೂ ಇರಲಿಲ್ಲ. ಸೋನಿಯಾ ಗಾಂಧಿಯ ಹಣವನ್ನು ಸಾಚಾ ಮಾಡುತ್ತಿದ್ದವರೇ ಅವರು. ತಮ್ಮ ಪುತ್ರನಿಗಾಗಿ ನಿಯಮವನ್ನೇ ಬದಲಿಸಿದವರು. ಅಂತಹ ಸಚಿವರನ್ನು ಶಿಕ್ಷೆಗೊಳಪಡಿಸಬೇಕು. ಭವಿಷ್ಯದಲ್ಲಿ ಮತ್ತೆ ಯಾರೂ ಇಂತಹ ತಪ್ಪು ಮಾಡಬಾರದು’ ಎಂದು ಸ್ವಾಮಿ ಕಿಡಿಕಾರಿದ್ದಾರೆ.

ಅಲ್ಲದೆ ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳು ಇನ್ನೂ ಚಿದಂಬರಂ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸದಿಂದ ಕಿತ್ತೊಗೆಯಬೇಕು ಎಂದು ನಾನು ಆಗ್ರಹಿಸಿದರೂ ಸಚಿವ ಅರುಣ್ ಜೇಟ್ಲಿ ಕಿವಿಗೊಡುತ್ತಿಲ್ಲ ಎಂದಿದ್ದಾರೆ.

ಅಲ್ಲದೆ ಸರ್ಕಾರ ತನ್ನ ಧ್ವನಿ ಹತ್ತಿಕ್ಕಲು ನೋಡುತ್ತಿದೆ ಎಂಬ ಚಿದಂಬರಂ ಆರೋಪವನ್ನು ಪ್ರಶ್ನಿಸಿದ ಸ್ವಾಮಿ, ಅವರಿಗೆ ಯಾವ ಧೈರ್ಯವಿದೆ. ಧೈರ್ಯವಿದ್ದರೆ ಸರ್ಕಾರದ ವಿರುದ್ಧ ಹೂಂಕರಿಸುವುದನ್ನು ಬಿಟ್ಟು ತಾನು ನಿರಪರಾಧಿ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments