Webdunia - Bharat's app for daily news and videos

Install App

ಹೋಟೆಲ್‌ನಲ್ಲಿ ಗ್ರಾಹಕ ಈರುಳ್ಳಿ ಕೇಳಿದ್ದಕ್ಕೆ ಮನಬಂದಂತೆ ಥಳಿಸಿದ ವೇಟರ್‌ಗಳು

Webdunia
ಸೋಮವಾರ, 2 ಡಿಸೆಂಬರ್ 2013 (16:54 IST)
PTI
23 ವರ್ಷ ವಯಸ್ಸಿನ ಮಯೂರ್ ಜಾಧವ್ ತಮ್ಮ ಕುಟುಂಬದೊಂದಿಗೆ ದಕ್ಷಿಣ ಮುಂಬೈನಲ್ಲಿರುವ ಹೋಟೆಲ್ಲೊಂದಕ್ಕೆ ತೆರಳಿದ್ದರು. ಊಟ ಮಾಡುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಈರುಳ್ಳಿ ನೀಡುವಂತೆ ವೇಟರ್‌ಗೆ ಕೋರಿದ್ದಾರೆ. ಈರುಳ್ಳಿ ದರ ಹೆಚ್ಚಾಗಿದ್ದರಿಂದ ಹೆಚ್ಚುವರಿ ಪ್ಲೇಟ್ ಈರುಳ್ಳಿ ನೀಡಲಾಗುವುದಿಲ್ಲ ಎಂದು ವೇಟರ್ ವಾದಿಸಿದ್ದಾನೆ. ಇದರಿಂದಾಗಿ ಉಭಯರ ಮಧ್ಯೆ ವಾಗ್ವಾದ ಹಿಂಸೆಗೆ ತೆರಳಿದಾಗ ಹೋಟೆಲ್ ಸಿಬ್ಬಂದಿ ಜಾಧವ್ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಘಟನೆ ವರದಿಯಾಗಿದೆ.

ಕಳೆದ ಎರಡು ವಾರಗಳಿಂದ ಈರುಳ್ಳಿ ದರ ಇಳಿಕೆಯಾಗಿದೆ. ಹೆಚ್ಚುವರಿ ಪ್ಲೇಟ್ ಈರುಳ್ಳಿ ಯಾಕೆ ಕೊಡುವುದಿಲ್ಲ ಎಂದು ಜಾಧವ್ ವೇಟರ್‌ಗೆ ಕೇಳಿದ್ದಾರೆ. ಈರುಳ್ಳಿ ದರದ ಬಗ್ಗೆ ನನಗೆ ಪಾಠ ಕಲಿಸಲು ಬರಬೇಡ ಎಂದು ವೇಟರ್ ಮಾರುತ್ತರ ನೀಡಿದ್ದಾನೆ.

ಪರಸ್ಪರ ವಾಗ್ವಾದ ಹಿಂಸಾರೂಪಕ್ಕೆ ತೆರಳಿದಾಗ ವೇಟರ್‌ನೊಬ್ಬ ಜಾಧವ್ ಮೇಲೆ ಎಸೆದ ಗ್ಲಾಸ್‌ ಮುಖಕ್ಕೆ ಬಡಿದಿದ್ದರಿಂದ ರಕ್ತ ಹರಿಯಲು ಆರಂಭಿಸಿದೆ.

ಗಾಯಗೊಂಡ ಜಾಧವ್ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಕಿರುಕುಳ ಮತ್ತು ಹಲ್ಲೆ ಆರೋಪಗಳನ್ನು ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments