Webdunia - Bharat's app for daily news and videos

Install App

ಹೆಚ್ಚು ಮಾತನಾಡಿದ್ರೆ ರುಂಡ ಕತ್ತರಿಸುತ್ತೇನೆ: ಕಾಂಗ್ರೆಸ್ ಮುಖಂಡನಿಗೆ ಟಿಎಂಸಿ ಶಾಸಕನ ಬೆದರಿಕೆ

Webdunia
ಸೋಮವಾರ, 22 ಜುಲೈ 2013 (12:44 IST)
PTI
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ಮಾಡಿ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕರೆ ನೀಡಿದ ಒಂದು ದಿನದ ನಂತರ, ಮತ್ತೊಬ್ಬ ಟಿಎಂಸಿ ಮುಖಂಡ, ಕಾಂಗ್ರೆಸ್ ಮುಖಂಡನ ತಲೆ ಕತ್ತರಿಸುವದಾಗಿ ಬೆದರಿಕೆಯೊಡ್ಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಭೀರ್‌ಭೂಮಿ ಜಿಲ್ಲೆಯ ಲಾಭಪುರ್ ಕ್ಷೇತ್ರದ ಶಾಸಕ ಮೊನಿರುಲ್ ಇಸ್ಲಾಮ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡ ಬಾಪಿ ದತ್ತಾ ಅವರ ರುಂಡ ಕತ್ತರಿಸಲು ಒಂದು ನಿಮಿಷ ಸಾಕು ಎಂದು ಅಬ್ಬರಿಸಿದ್ದರು.

ಮಹಿಳೆಯರ ವಿರುದ್ಧ ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿದ ಮೂವರು ವ್ಯಕ್ತಿಗಳನ್ನು ಕೂಡಾ ಹೊಸಕಿ ಹಾಕಿರುವುದಾಗಿ ಟಿಎಂಸಿ ಪಕ್ಷದ ಶಾಸಕ ಮೊನಿರುಲ್ ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಹೊಸತೊಂದು ಅಸ್ತ್ರ ದೊರೆತಂತಾಗಿದೆ.

ಟಿಎಂಸಿ ಮುಖಂಡ ಮೊನಿರುಲ್ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ ಬಾಪಿ ದತ್ತಾ, ತೃಣಮೂಲ ಕಾಂಗ್ರೆಸ್ ಪಕ್ಷ ಸಮಾಜ ವಿದ್ರೋಹಿಗಳ ಪಕ್ಷವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments