Webdunia - Bharat's app for daily news and videos

Install App

ಹಿಂದೂರಕ್ಷದಳದ ಗೂಂಡಾಗಿರಿ: ಆಮ್ ಆದ್ಮಿ ಕಚೇರಿ ಮೇಲೆ ದಾಳಿ

Webdunia
ಬುಧವಾರ, 8 ಜನವರಿ 2014 (12:32 IST)
PR
PR
30 ರಿಂದ 40 ಜನರಿದ್ದ ಹಿಂದು ರಕ್ಷದಳದ ಗುಂಪೊಂದು ಆಮ್ ಆದ್ಮಿ ಕೌಶಂಬಿ ಕಚೇರಿ ಮೇಲೆ ದಾಳಿ ನಡೆಸಿ ಕಲ್ಲು ತೂರಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸಂಭವಿಸಿದೆ. ಕಚೇರಿಯ ಕೋಣೆಯಲ್ಲಿ ಬೀಗ ಹಾಕಿಕೊಂಡ ಎಎಪಿ ಕಾರ್ಯಕರ್ತರು ದಾಳಿಯಿಂದ ಬಚಾವಾದರು. ಆದಾಗ್ಯೂ ದಾಳಿಕೋರರು ಬಾಗಿಲು ಒಡೆಯಲು ಕೂಡ ಪ್ರಯತ್ನಿಸಿ ನಂತರ ನೆಲಮಹಡಿಯಲ್ಲಿ ದಾಂಧಲೆ ಮಾಡಿ ತೆರಳಿದರು. ದಾಳಿಕೋರರು ಲಾಠಿಗಳನ್ನು ಹಿಡಿದಿದ್ದರು ಮತ್ತು ಕಲ್ಲುಗಳನ್ನು ತೂರುತ್ತಿದ್ದರು ಎಂದು ಕಚೇರಿಯೊಳಗಿದ್ದ ಎಎಪಿ ನಾಯಕ ದಿಲೀಪ್ ಪಾಂಡೆ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಸೇನೆ ನಿಯೋಜನೆ ಬಗ್ಗೆ ಜನಮತ ಸಂಗ್ರಹಿಸಬೇಕು ಎಂದು ಪ್ರಶಾಂತ್ ಭೂಷಣ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಆದರೆ ಕೇಜ್ರಿವಾಲ್ ಈ ಹೇಳಿಕೆ ಬಗ್ಗೆ ಇದು ಪಕ್ಷದ ಅಭಿಪ್ರಾಯವಲ್ಲ ಎಂದು ತಿಳಿಸಿದ್ದರು. ಪ್ರಶಾಂತ್ ಭೂಷಣ್ ಕೂಡ ಈ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಪ್ರಶಾಂತ್ ಭೂಷಣ್ ಹೇಳಿಕೆಯನ್ನು ಖಂಡಿಸಿ ಹಿಂದು ರಕ್ಷದಳದ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ 30 ರಿಂದ 40 ಜನರ ಗುಂಪು ಈ ಕೃತ್ಯವೆಸಗಿದೆ. ಕೆಂಪು ಬಾವುಟ ಹಿಡಿದುಕೊಂಡು ಬಂದಿದ್ದ ಅವರು ದಾಳಿ ನಡೆಸಿದರು. ಈ ದಾಳಿಯನ್ನು ಎಎಪಿ ತೀವ್ರವಾಗಿ ಖಂಡಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments