Select Your Language

Notifications

webdunia
webdunia
webdunia
webdunia

ಹರ್ಯಾಣದಲ್ಲಿ ಕೇಜ್ರಿವಾಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ದಾಳಿ

ಹರ್ಯಾಣದಲ್ಲಿ ಕೇಜ್ರಿವಾಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ದಾಳಿ
, ಶುಕ್ರವಾರ, 28 ಮಾರ್ಚ್ 2014 (19:31 IST)
PR
PR
ಹರ್ಯಾಣ: ಹರ್ಯಾಣದ ಎಎಪಿ ರ‌್ಯಾಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಮ್ ಆದ್ಮಿ ಮುಖಂಡ ಕೇಜ್ರಿವಾಲ್ ಮೇಲೆ ಏಕಾಏಕಿ ದಾಳಿಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಕೇಜ್ರಿವಾಲ್ ಕುತ್ತಿಗೆಗೆ ಬಲವಾಗಿ ಹೊಡೆದ ವ್ಯಕ್ತಿ ನಂತರ ಅವರ ಮೇಲೆ ಹಲ್ಲೆಗೆ ವ್ಯಕ್ತಿ ಯತ್ನಿಸಿದಾಗ ಎಎಪಿ ಕಾರ್ಯಕರ್ತರು ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರ ವಶಕ್ಕೆ ಒಪ್ಪಿಸಿದರು. ಈ ಘಟನೆಯು ಚಾರ್ಕಿ ದಾದ್ರಿಯಲ್ಲಿ ಸಂಭವಿಸಿದೆ.

ಕೇಜ್ರಿವಾಲ್ ನಂತರ ಟ್ವೀಟ್ ಮಾಡಿ, ಯಾರೋ ಅಪರಿಚಿತ ನನ್ನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಇಂತಹ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿದ್ದೆ.ಇದು ಹತಾಶೆಯಿಂದ ಅವರ ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.ನಂತರ ಕೇಜ್ರಿವಾಲ್ ತಮ್ಮ ಬೆಂಬಲಿಗರಿಗೆ ಸಲಹೆ ನೀಡುತ್ತಾ, ಹಿಂಸೆಗೆ ಇಳಿಯಬೇಡಿ. ಹಿಂಸಾತ್ಮಕ ಚಟುವಟಿಕೆಯಿಂದ ನಮ್ಮ ಆಂದೋಳನ ಮುಗಿಯುವ ಹಂತಕ್ಕೆ ಮುಟ್ಟುತ್ತದೆ. ಆದ್ದರಿಂದ ಯಾರೇ ಹೊಡೆದರೂ ಅವರ ಬಗ್ಗೆ ನಯವಾಗಿರಿ ಎಂದು ಹೇಳಿದ್ದಾರೆ.

Share this Story:

Follow Webdunia kannada