Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ಆದೇಶ ಪಾಲನೆ: ದುರ್ಗಾಶಕ್ತಿ ಸ್ಪಷ್ಟನೆ

ಸುಪ್ರೀಂಕೋರ್ಟ್ ಆದೇಶ ಪಾಲನೆ: ದುರ್ಗಾಶಕ್ತಿ ಸ್ಪಷ್ಟನೆ
ಲಖನೌ , ಶನಿವಾರ, 17 ಆಗಸ್ಟ್ 2013 (10:54 IST)
PTI
ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಚಾರ್ಜ್‌ಶೀಟ್‌ಗೆ ಉತ್ತರ ನೀಡಿದ್ದಾರೆ. ನಾನು ನಿರಪರಾಧಿ, ಮಸೀದಿ ಗೋಡೆ ಕೆಡಹುವ ಪ್ರಕರಣದಲ್ಲಿ ನಾನು ಸುಪ್ರೀಂಕೋರ್ಟ್‌ನ ಆದೇಶವನ್ನಷ್ಟೇ ಪಾಲಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆ.4ರಂದು ದುರ್ಗಾಶಕ್ತಿ ಅವರಿಗೆ ಚಾರ್ಜ್‌ಶೀಟ್ ನೀಡಿದ್ದ ಉತ್ತರ ಪ್ರದೇಶ ಸರ್ಕಾರ ಮಸೀದಿ ಗೋಡೆ ಕೆಡಹುವ ವೇಳೆ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿತ್ತು.

ಅಲ್ಲದೆ, ಇದು ಕೋಮುಗಲಭೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇತ್ತು ಎಂದು ದೂರಿತ್ತು. ಆದರೆ ದುರ್ಗಾಶಕ್ತಿ ನೀಡಿದ ಉತ್ತರದಲ್ಲಿ, ಗೋಡೆ ನಿರ್ಮಾಣ ಕಾನೂನುಬಾಹಿರ ಎಂಬುದನ್ನು ಗ್ರಾಮಸ್ಥರಿಗೆ ಹಿಂದೆಯೂ ತಿಳಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada