Webdunia - Bharat's app for daily news and videos

Install App

ಸುನಾಮಿ 'ಸೂಪರ್ ಮೂನ್' ಪ್ರಭಾವ, ಇಷ್ಟಕ್ಕೆ ಮುಗಿಯಲ್ಲ?

Webdunia
ಶುಕ್ರವಾರ, 11 ಮಾರ್ಚ್ 2011 (14:24 IST)
ಜಪಾನ್‌ ಕರಾವಳಿಯನ್ನು ಸೂರೆಗೈಯುತ್ತಿರುವ ಸುನಾಮಿ 'ಸೂಪರ್ ಮೂನ್'ನಿಂದಾಗಿಯೇ ಸಂಭವಿಸಿರಬಹುದು. ಇದರಿಂದಾಗಿ ಇನ್ನಷ್ಟು ಪ್ರಕೃತಿ ವಿಕೋಪಗಳು ಸಂಭವಿಸಬಹುದು ಎಂದು 'ಸೂಪರ್ ಮೂನ್'ನಿಂದಾಗಿ ಭೂಮಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದ ವಿಜ್ಞಾನಿಗಳು ವಿಶ್ಲೇಷಣೆ ನಡೆಸುತ್ತಿದ್ದಾರೆ.

ಮಾರ್ಚ್ 19ರಂದು ಭೂಮಿಯ ಸಮೀಪಕ್ಕೆ ಚಂದ್ರ ಬರಲಿದ್ದು, ಇದನ್ನು 'ಸೂಪರ್ ಮೂನ್' ಎಂದು ಕರೆಯಲಾಗಿದೆ. ಈ ಸಂದರ್ಭದಲ್ಲಿ ಭೂಮಿಯಲ್ಲಿ ಚಂಡಮಾರುತ, ಜ್ವಾಲಾಮುಖಿ ಮತ್ತು ಸುನಾಮಿಗಳು ಸಂಭವಿಸಬಹುದು ಎಂದು ಕೆಲವು ವಿಜ್ಞಾನಿಗಳು ಮತ್ತು ಜ್ಯೋತಿಷಿಗಳು ಎಚ್ಚರಿಕೆ ನೀಡಿದ್ದರು.

ಮಾರ್ಚ್ 19ರಂದು ಭೂಮಿಯ ಅತಿ ಹತ್ತಿರಕ್ಕೆ ಚಂದ್ರ ಬರುತ್ತಾನೆ. ಅಂದರೆ ಆ ದಿನ ಭೂಮಿ ಮತ್ತು ಚಂದ್ರನ ನಡುವಿನ ಅಂತರ ಕೇವಲ 2,21,556 ಮೈಲು ಮಾತ್ರ. ಭೂಮಿಯ ಸನಿಹಕ್ಕೆ ಚಂದ್ರ ಬರುವುದುದು ( lunar perigee) ಒಂದು ಸಾಮಾನ್ಯ ಪ್ರಕ್ರಿಯೆಯಾದರೂ, ಹುಣ್ಣಿಮೆಯ ದಿನದಂದೇ ಇದು ನಡೆಯುತ್ತಿರುವುದು ಭೂಮಿಯ ಮಟ್ಟಿಗೆ ಅಪಾಯಕಾರಿ ಎಂದು ವಿಶ್ಲೇಷಣೆ ನಡೆಸಲಾಗಿತ್ತು.

ಆದರೆ ಇದನ್ನು ಹಲವು ವಿಜ್ಞಾನಿಗಳು ಒಪ್ಪಿಕೊಂಡಿರಲಿಲ್ಲ. ಚಂದ್ರ ಮತ್ತು ಭೂಮಿಯ ನಡುವಿನ ಅಂತರ ಕಡಿಮೆಯಾಗುವುದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ಭೀಕರ ಸುನಾಮಿ ಜಪಾನ್ ಕರಾವಳಿಯನ್ನು ಅಪ್ಪಳಿಸಿರುವುದರಿಂದ, ಇದು ಸೂಪರ್ ಮೂನ್ ಪ್ರಭಾವ ಇರಬಹುದೇ ಎಂಬ ಶಂಕೆಗಳು ಹುಟ್ಟಿಕೊಂಡಿವೆ.

ವಿಕೋಪ ಇಷ್ಟಕ್ಕೆ ಮುಗಿಯಲ್ಲ...
ಹೀಗೆಂದು ಹೇಳಿರುವುದು ಪ್ರಖ್ಯಾತ ಜ್ಯೋತಿಷಿ ಸಚ್ಚಿದಾನಂದ ಮೂರ್ತಿ. ಜಪಾನ್ ಸುನಾಮಿ ಘಟಿಸಿದ ನಂತರ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಅವರು, ನಾವು ಜನರನ್ನು ಹೆದರಿಸುತ್ತಿಲ್ಲ; ಆದರೆ ಪ್ರಕೃತಿ ವಿಕೋಪಗಳು ಇಷ್ಟಕ್ಕೆ ಮುಗಿಯುವುದಿಲ್ಲ ಎಂದು ಹೇಳಿದರು.

ಜಪಾನ್‌ನಲ್ಲಿ ನಡೆದಿರುವ ಸುನಾಮಿ ಒಂದು ಎಚ್ಚರಿಕೆ ಮಾತ್ರ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಇನ್ನೂ ಹೆಚ್ಚಾಗಲಿದೆ. ಗುರುತ್ವಾಕರ್ಷಣೆ ಹೆಚ್ಚುವುದರಿಂದ ಮತ್ತು ಬದಲಾಗುವುದರಿಂದ ಇನ್ನಷ್ಟು ಅಪಾಯಗಳು ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Show comments