Webdunia - Bharat's app for daily news and videos

Install App

ಸುಖಕರ ನಿದ್ರೆಗೆ ಕಠಿಣ ಕೆಲಸ ಕೋರಿದ ಸಂಜಯ್ ದತ್

Webdunia
ಭಾನುವಾರ, 2 ಜೂನ್ 2013 (17:33 IST)
PR
PR
ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ದತ್‌ ಇಲ್ಲಿನ ಯರವಾಡ ಕೇಂದ್ರ ಕಾರಾಗೃಹದಲ್ಲಿ ಕಠಿಣ ಕೆಲಸ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾರಾಗೃಹದ ಅಧಿಕಾರಿಗಳು ಸಂಜಯ್‌ ಬೇಡಿಕೆಯನ್ನು ಸದ್ಯಕ್ಕೆ ತಿರಸ್ಕರಿಸಿದ್ದಾರೆ.

ಕಳೆದ 9 ದಿನಗಳಿಂದ ಜೈಲಿನಲ್ಲಿರುವ ಸಂಜಯ್‌ದತ್‌ ಇಂಥ ಒಂದು ಅಚ್ಚರಿಯ ಬೇಡಿಕೆ ಇಟ್ಟಿದ್ದರಂತೆ. ರಾತ್ರಿ ಸುಖಕರವಾಗಿ ನಿದ್ದೆ ಮಾಡುವ ಸಲುವಾಗಿ ಮೈಮುರಿದು ಕೆಲಸ ಮಾಡಬೇಕು. ಅದಕ್ಕೇ ಕಠಿಣ ಕೆಲಸ ಕೊಡಿ ಎಂದು ದತ್‌ ಬಯಸಿದ್ದರು. ಆದರೆ ಇವರ ಬೇಡಿಕೆಯನ್ನು ಜೈಲು ಅಧಿಕಾರಿಗಳು ಸಾಕಾರಗೊಳಿಸಿಲ್ಲ ಎಂದು ಮೂಲಗಳು ಹೇಳಿವೆ.

ಈ ನಡುವೆ, ಕುರ್ಚಿ ನೇಯುವ ಕೆಲಸ ನೀಡುವಂತೆ ದತ್‌ ಕೋರಿದ್ದಾರೆ. ಆದರೆ ಅದು ಸೂಕ್ಷ್ಮ ಕೆಲಸವಾಗಿರುವ ಕಾರಣ, ಅದು ಅವರ ಕಣ್ಣಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣದಿಂದ ಆ ಬೇಡಿಕೆಯನ್ನೂ ತಳ್ಳಿಹಾಕಲಾಗಿದೆ. 2007ರಲ್ಲಿ ಇದೇ ಜೈಲಿನಲ್ಲಿ ದತ್‌ 3 ಕುರ್ಚಿ ಹೆಣೆದಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments