Select Your Language

Notifications

webdunia
webdunia
webdunia
webdunia

ಸುಖಕರ ನಿದ್ರೆಗೆ ಕಠಿಣ ಕೆಲಸ ಕೋರಿದ ಸಂಜಯ್ ದತ್

ಸುಖಕರ ನಿದ್ರೆಗೆ ಕಠಿಣ ಕೆಲಸ ಕೋರಿದ ಸಂಜಯ್ ದತ್
ಪುಣೆ , ಭಾನುವಾರ, 2 ಜೂನ್ 2013 (17:33 IST)
PR
PR
ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ದತ್‌ ಇಲ್ಲಿನ ಯರವಾಡ ಕೇಂದ್ರ ಕಾರಾಗೃಹದಲ್ಲಿ ಕಠಿಣ ಕೆಲಸ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾರಾಗೃಹದ ಅಧಿಕಾರಿಗಳು ಸಂಜಯ್‌ ಬೇಡಿಕೆಯನ್ನು ಸದ್ಯಕ್ಕೆ ತಿರಸ್ಕರಿಸಿದ್ದಾರೆ.

ಕಳೆದ 9 ದಿನಗಳಿಂದ ಜೈಲಿನಲ್ಲಿರುವ ಸಂಜಯ್‌ದತ್‌ ಇಂಥ ಒಂದು ಅಚ್ಚರಿಯ ಬೇಡಿಕೆ ಇಟ್ಟಿದ್ದರಂತೆ. ರಾತ್ರಿ ಸುಖಕರವಾಗಿ ನಿದ್ದೆ ಮಾಡುವ ಸಲುವಾಗಿ ಮೈಮುರಿದು ಕೆಲಸ ಮಾಡಬೇಕು. ಅದಕ್ಕೇ ಕಠಿಣ ಕೆಲಸ ಕೊಡಿ ಎಂದು ದತ್‌ ಬಯಸಿದ್ದರು. ಆದರೆ ಇವರ ಬೇಡಿಕೆಯನ್ನು ಜೈಲು ಅಧಿಕಾರಿಗಳು ಸಾಕಾರಗೊಳಿಸಿಲ್ಲ ಎಂದು ಮೂಲಗಳು ಹೇಳಿವೆ.

ಈ ನಡುವೆ, ಕುರ್ಚಿ ನೇಯುವ ಕೆಲಸ ನೀಡುವಂತೆ ದತ್‌ ಕೋರಿದ್ದಾರೆ. ಆದರೆ ಅದು ಸೂಕ್ಷ್ಮ ಕೆಲಸವಾಗಿರುವ ಕಾರಣ, ಅದು ಅವರ ಕಣ್ಣಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣದಿಂದ ಆ ಬೇಡಿಕೆಯನ್ನೂ ತಳ್ಳಿಹಾಕಲಾಗಿದೆ. 2007ರಲ್ಲಿ ಇದೇ ಜೈಲಿನಲ್ಲಿ ದತ್‌ 3 ಕುರ್ಚಿ ಹೆಣೆದಿದ್ದರು.

Share this Story:

Follow Webdunia kannada