Webdunia - Bharat's app for daily news and videos

Install App

ಸಿಡಿಯಲ್ಲಿ ಸಿಕ್ಕಿಬಿದ್ದ ಸೆಕ್ಸ್‌ ಸ್ವಾಮಿಗೆ ಪ್ರತಿವಾರವೂ ಹೊಸ ಹುಡುಗಿ ಬೇಕಂತೆ.

Webdunia
ಸೋಮವಾರ, 31 ಮಾರ್ಚ್ 2014 (17:29 IST)
ಪ್ರತಿ ದಿನವೂ ಹೊಸ ಹುಡುಗಿ ಬೇಕು. ಆ ಹೊಸ ಹುಡುಗಿ ಫ್ರೆಶ್‌ ಆಗಿರಬೇಕು. ಒಮ್ಮೆ ಸಂಭೋಗಿಸಿದ ಹುಡುಗಿಯ ಜೊತೆ ಆ ಸ್ವಾಮಿ ಮತ್ತೊಮ್ಮೆ ಸಂಭೋಗಿಸುತ್ತಿರಲಿಲ್ಲ. ಸ್ವಾಮಿಯಾದವನ ಅತಿರೇಕದ ಕಾಮ ಅವನಿಗೆ ಗೊತ್ತಿಲ್ಲದೇ ಸಿಡಿಯಲ್ಲಿ ರೆಕಾರ್ಡ್ ಆಗಿಬಿಟ್ಟಿತ್ತು.

ಗುಜರಾತ್‌ ಸಿಜ್‌ಪುರ ಬಳಿ ಇರುವ ವಿಶ್ವಮಂಗಳ ಗುರುಕುಲ್‌ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗುರುಕಲಕ್ಕೆ ಬರುವ ಅನುಯಾಯಿಗಳು ಶ್ರೀಮಂತ ವರ್ಗದವರೇ ಆಗಿದ್ದಾರೆ. ಹೀಗಾಗಿ ಗುರುಕುಲಕ್ಕೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಆಶ್ರಮಕ್ಕೆ ಬರುತ್ತಿದ್ದ ಹಣವನ್ನು ಈ ಕಾಮಿ ಸ್ವಾಮಿ "ತನಗೆ ಸುಖ ಕೊಟ್ಟ ಹುಡುಗಿಯರಿಗೆ ನೀಡಲು" ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸುದ್ದಿ ಮುಂದಿನ ಪುಟಕ್ಕೆ......

ಹೆಣ್ಣು, ಹೊನ್ನು ಮಣ್ಣಿನ ಹಿಂದೆ ಹೋದವನು ಬೇಗನೆ ಮಣ್ಣು ಮುಕ್ಕುತ್ತಾನೆ ಅನ್ನೋ ಮಾತು ಅಕ್ಷರಶಃ ನಿಜವಾಗಿದೆ. ಅಹಮದಾಬಾದ್‌ ಸಮೀಪದ ಆಶ್ರಮದಲ್ಲಿನ ಕಾಮಿ ಸ್ವಾಮಿಯೊಬ್ಬ ಇದೀಗ ತಾನು ತೋಡಿದ ಬಾವಿಗೆ ತಾನೇ ಬಿದ್ದಿದ್ದಾನೆ. ಈ ಆಶ್ರಮದ ಕಾಮಿ ಸ್ವಾಮಿಯ ಮಂಚಕ್ಕೆ ಆಶ್ರಮದ ಸಿಬ್ಬಂದಿಗಳು ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದರು...

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....

PTI
PTI


ಕಾಮ ಕೆರಳಿದ ಖಾವಿಯೊಳಗಿನ ಖದೀಮನಿಗೆ ಪ್ರತಿ ವಾರವೂ ಹೊಸ ಹುಡುಗಿಯರೇ ಬೇಕಿತ್ತು. ಈ ಕಾಮಿ ಸ್ವಾಮಿ ಒಮ್ಮೆ ಮಲಗಿದ ಹುಡುಗಿಯರ ಜೊತೆ ಮತ್ತೊಮ್ಮೆ ಮಲಗುತ್ತಿರಲಿಲ್ಲ. ಒಮ್ಮೆ ಸುಖವುಂಡ ಹುಡುಗಿಯನ್ನು ಮುಟ್ಟುತ್ತಲೂ ಇರಲಿಲ್ಲ. ಪ್ರತಿ ವಾರವೂ ಹೊಸ ಹುಡುಗಿ ಬೇಕಿತ್ತು. ಆ ಹುಡುಗಿ ದೈಹಿಕವಾಗಿ ಫ್ರೆಶ್‌ ಆಗಿ ಇರಬೇಕಿತ್ತು. ಫ್ರೆಶ್‌ ಹುಡುಗಿಯರ ಜೊತೆಗೆ ಈತನ ಕಾಮ ಕೇಳಿ ನಿರಂತರವಾಗಿ ನಡೆಯುತ್ತಿತ್ತು.

ಹೀಗಾಗಿ ಹೊಸ ಹುಡುಗಿಯರನ್ನೇ ತನ್ನ ಮಂಚಕ್ಕೆ ಕಳಿಸಬೇಕು ಅಂತ ಕಾಮಿ ಸ್ವಾಮಿ ಆಶ್ರಮದ ಸಿಬ್ಬಂದಿಯೊಬ್ಬರಿಗೆ ಖಡಕ್‌ ಆಗಿ ತಾಕೀತು ಮಾಡಿದ್ದ....

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ......

PTI
PTI

ಸೆಕ್ಸ್‌ ಸುಖವುಂಡ ಸ್ವಾಮಿ ಆ ಹುಡುಗಿಯರನ್ನು ನಿರಾಸೆಗೊಳಿಸುತ್ತಿರಲಿಲ್ಲ. ಅವರು ಕೊಟ್ಟ ಸುಖಕ್ಕೆ ಪ್ರತಿಯಾಗಿ ಅವರಿಗೆ 5 ಸಾವಿರ ಅಥವ 10 ಸಾವಿರ ರೂಪಾಯಿಗಳನ್ನು ನೀಡಿ ಕಳಿಸುತ್ತಿದ್ದ. ಹಣ ಸಿಕ್ಕ ಖುಷಿ ಒಂದೆಡೆಯಾದರೆ, ದೇವರಿಗೆ ತನ್ನ ದೇಹವನ್ನು ಅರ್ಪಿಸಿದ ತೃಪ್ತಿ ಆ ಮುಗ್ಧ ಹೆಣ್ಣು ಮಕ್ಕಳಲ್ಲಿ ಇರುತ್ತಿತ್ತು.

ಸ್ವಾಮಿಗೆ ದೇಹವನ್ನು ಅರ್ಪಿಸುವುದು ದೈವ ಕಾರ್ಯ ಎಂದು ಅವನ ಅನುಯಾಯಿಗಳು ಬಿಂಬಿಸುತ್ತಿದ್ದರು. ಈ ಮೂಲಕ ಹುಡುಗಿಯರ ಬ್ರೈನ್ ವಾಶ್ ಮಾಡುತ್ತಿದ್ದರು.

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....

PTI
PTI

ಸ್ವಾಮಿಗಾಗಿ ಹುಡುಗಿಯರ ಮನಸ್ಸನ್ನು ಬದಲಾಯಿಸಿ ಅವರನ್ನು ಸ್ವಾಮಿಯ ಮಂಚಕ್ಕೆ ತರುವಲ್ಲಿ ಸಿಬ್ಬಂದಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಹುಡುಗಿಯರಿಗೆ ಬ್ರೈನ್‌ ವಾಶ್‌ ಮಾಡಿ ಅವರನ್ನು ತಮ್ಮ ಕೈ ವಶ ಮಾಡಿಕೊಂಡು ಸ್ವಾಮಿ ಪಲ್ಲಂಗಕ್ಕೆ ಕಳಿಸುತ್ತಿದ್ದರು. ಆದ್ರೆ ಈ ಕಾಮಿ ಸ್ವಾಮಿಗೆ ಪ್ರತಿ ವಾರವೂ ಫ್ರೆಶ್‌ ಹುಡುಗಿಯರನ್ನು ಸರಬರಾಜು ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಸಾಕಾಗಿ ಹೋಗಿತ್ತು.

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....

PTI
PTI


ಹೀಗಾಗಿ ಬೇಸತ್ತ ಆಶ್ರಮವಾಸಿಯೊಬ್ಬರು ಸ್ವಾಮಿ ಮಾಡುತ್ತಿದ್ದ ಕಾಮ ಕೇಳಿಯನ್ನು ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ಅದನ್ನು ಪೋಲೀಸರಿಗೆ ನೀಡುವ ಬದಲು, ಬ್ಲಾಕ್‌ ಮೇಲ್‌ ಮಾಡಿ ತಾನೂ ಒಂದಿಷ್ಟ ಹಣ ಸಂಪಾದನೆ ಮಾಡಲು ಯೋಚಿಸಿದ್ದಾನೆ.

ಸ್ವಾಮಿಯ ಸೆಕ್ಸ್ ಸಿಡಿ ಇಟ್ಟುಕೊಂಡು ಆಶ್ರಮಕ್ಕೆ ಫೋನ್‌ ಮಾಡಿದ ಅವರು "ನಿನ್ನ ಕಾಮ ಕೇಳಿಯ ರಸಭರಿತ ಸಿಡಿಗಳು ನಮ್ಮ ಬಳಿ ಇದೆ. ನೀನು 50 ಲಕ್ಷ ರೂಪಾಯಿಗಳನ್ನು ನೀಡದೇ ಇದ್ದರೆ ಇದನ್ನು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಬಹಿರಂಗ ಪಡಿಸುತ್ತೇವೆ" ಎಂದು ಬ್ಲಾಕ್‌ಮೇಲ್‌ ಮಾಡಿದ್ದಾರೆ.

ಇನ್ನಷ್ಟು ಸುದ್ದಿ ಮುಂದಿನ ಪುಟಕ್ಕೆ..

PTI
PTI

ಕೇಳಿದಷ್ಟು ಹಣ ಕೊಡ್ತೀನಿ ಎಂದು ಒಪ್ಪಿಕೊಂಡ ಸ್ವಾಮಿ ಮತ್ತೆ ಡಬಲ್‌ ಗೇಮ್ ಆಡಲು ಮುಂದಾಗಿದ್ದಾನೆ. ತನಗೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಿದ್ದಾನೆ. ಅಲ್ಲೇ ಆಗಿದ್ದು ಯಡವಟ್ಟು...

ಬ್ಲಾಕ್‌ ಮೇಲ್‌ ಮಾಡಿದವರಿಗೆ ಹಣ ನೀಡುವ ಸಮಯದಲ್ಲಿ ಪೋಲೀಸರು ಅವರನ್ನು ಬಂಧಿಸಿ ಎಳೆದೊಯ್ದಿದ್ದಾರೆ. ಮಾಡಿದ ತಪ್ಪಿಗೆ ತೆಪ್ಪಗಿದ್ದು ಕೇಳಿದಷ್ಟು ಹಣ ನೀಡಿದ್ದರೆ ಬಹುಷ ಅವನ ಕಾಮಕೇಳಿಯ ದೃಶ್ಯಗಳು ಅಲ್ಲಿಗೇ ಮುಚ್ಚಿ ಹೋಗುತ್ತಿದ್ದವು. ಆದ್ರೆ ತನಗೆ ಪೋಲೀಸರ ಬೆಂಬಲವಿದೆ ಎಂದು ಆರ್ಭಟಿಸಿದ ಕಾಮಿ ಸ್ವಾಮಿ ಪೋಲೀಸರಿಗೆ ದೂರು ನೀಡಿದ್ದೇ ಮುಳುವಾಗಿ ಹೋಯ್ತು.

ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ...

PTI
PTI

ಬಂಧಿತ ಆರೋಪಿಗಳು ತಮ್ಮ ಬಳಿ ಇದ್ದ ಸ್ವಾಮಿಜಿಯ ಕಾಮಕೇಳಿಯ ಸೆಕ್ಸ್‌ ಸಿಡಿಗಳನ್ನು ಖದೀಮರು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅದರಲ್ಲಿ ಇಲ್ಲಿನ ಆಶ್ರಮದ ಇಬ್ಬರು ಸ್ವಾಮಿಗಳು ಹುಡುಗಿಯರ ಜೊತೆಯಲ್ಲಿ ಕಾಮ ಕೇಳಿಯಲ್ಲಿ ಮಗ್ನರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಕಾಮಿ ಸ್ವಾಮಿಯ ಪರ್ಸನಲ್‌ ಡೈರಿ ತೆಗೆದು ನೋಡಿದಾಗ ಪೋಲೀಸರಿಗೆ ಮತ್ತೊಂದು ಶಾಕ್‌ ಕಾದಿತ್ತು.

ಇನ್ನಷ್ಟು ಮಾಹಿತಿ ಮುಂದಿನ ಪುಟಕ್ಕೆ...
PTI
PTI

ಆ ಸ್ವಾಮಿ ತನ್ನ ಪರ್ಸನಲ್‌ ಡೈರಿ ತೆಗೆದು ನೋಡಿದಾಗ ಸ್ವಾಮಿಯ ಕಾಮ ಕೇಳಿ ಹೊರ ಬಿದ್ದಿದೆ. ತನ್ನ ಕಾಮ ಸುಖದ ನವಿರಾದ ಅನುಭವಗಳನ್ನು ಸ್ವತಃ ಸ್ವಾಮಿಯೇ ಡೈರಿಯೊಳಗೆ ಬರೆದಿಟ್ಟಿದ್ದ. ಸ್ವಾಮಿ ತಾನು ತೋಡಿದ ಹಳ್ಳಕ್ಕೆ ತಾನೆ ಬಿದ್ದಿದ್ದಾನೆ. ಡೈರಿ ನೋಡಿದ ಪೋಲೀಸರು ಕಂಪ್ಲೇಂಟ್‌ ಕೊಟ್ಟಿದ್ದ ಕಾಮಿ ಸ್ವಾಮಿಯನ್ನು ಬಂಧಿಸಲು ತಡಕಾಡಿದ್ದಾರೆ. ಆದ್ರೆ ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸ್ವಾಮಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

PTI
PTI

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ