Select Your Language

Notifications

webdunia
webdunia
webdunia
webdunia

ಸರಕಾರ-ಸೇನೆಯ ಸಂಬಂಧ ಸರ್ವಕಾಲಿಕ ಕುಸಿತ: ಆಡ್ವಾಣಿ

ಸರಕಾರ-ಸೇನೆಯ ಸಂಬಂಧ ಸರ್ವಕಾಲಿಕ ಕುಸಿತ: ಆಡ್ವಾಣಿ
ನವದೆಹಲಿ , ಶುಕ್ರವಾರ, 6 ಏಪ್ರಿಲ್ 2012 (16:57 IST)
PTI
ಕಳೆದ ಜನವೆರಿಯಲ್ಲಿ ಸರಕಾರಕ್ಕೆ ಮಾಹಿತಿ ನೀಡದೆ ಎರಡು ಸೇನಾ ತುಕುಡಿಗಳ ದೆಹಲಿಯತ್ತ ಧಾವಿಸುತ್ತಿದ್ದವು ಎನ್ನುವ ಪತ್ರಿಕಾ ವರದಿ ಆಘಾತ ತಂದಿದೆ. ಸರಕಾರ-ಸೇನೆಯ ಮಧ್ಯೆ ಇಂತಹ ಕಂದಕ ಯಾವತ್ತು ಏರ್ಪಟ್ಟಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.

ಏಪ್ರಿಲ್ 4 ರಂದು ಪ್ರಕಟವಾದ ಪತ್ರಿಕಾ ವರದಿಗಳು ಮತ್ತು ಏಪ್ರಿಲ್ 5 ರಂದು ಪ್ರಕಟವಾದ ಸಂಬಂಧಿತ ಲೇಖನಗಳನ್ನು ನೋಡಿದಲ್ಲಿ ಖಂಡಿತವಾಗಿ ಎಚ್ಚರಿಕೆಯ ಸಂದೇಶ ಸಾರುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಮತ್ತು ಸೇನೆಯ ಮಧ್ಯೆದ ವಾತಾವಾರಣ ಸರ್ವಕಾಲಿಕ ಕುಸಿತ ಕಂಡಿದೆ ಎಂದು ಬಿಜೆಪಿ ವಕ್ತಾರು ರಾಜೀವ್ ಪ್ರತಾಪ್ ರೂಢಿ ಹೇಳಿಕೆಯನ್ನು ಬೆಂಬಲಿಸುವುದಾಗಿ ಆಡ್ವಾಣಿ ತಿಳಿಸಿದ್ದಾರೆ.

ಹರಿಯಾಣಾದ ಹಿಸಾರ್‌ನಲ್ಲಿದ್ದ ಸೇನಾ ತುಕುಡಿಗಳು, ಜನೆವರಿ 16-17 ರಂದು ನವದೆಹಲಿಯತ್ತ ಧಾವಿಸುತ್ತಿದ್ದವು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada