Webdunia - Bharat's app for daily news and videos

Install App

ಸತ್ತ ತಂದೆಯೊಂದಿಗೆ ಸಂವಾದ ನಡೆಸುವ ಭರವಸೆ ನೀಡಿ ದೇಹವನ್ನು ಸುಟ್ಟ ಮಾಂತ್ರಿಕ ಮಹಿಳೆ

Webdunia
ಮಂಗಳವಾರ, 12 ನವೆಂಬರ್ 2013 (13:10 IST)
PR
ತಂದೆಯ ಸಾವಿನಿಂದ ಖಿನ್ನತೆಗೊಳಗಾಗಿ ಆತನ ಆತ್ಮದೊಂದಿಗೆ ಸಂವಾದ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದ ವ್ಯಕ್ತಿಗೆ, ತಂದೆಯೊಂದಿಗೆ ಚರ್ಚಿಸುವಂತೆ ಮಾಡುವುದಾಗಿ ಭರವಸೆ ನೀಡಿ ಎರಡು ತಿಂಗಳುಗಳ ಕಾಲ ದೈಹಿಕವಾಗಿ ಹಿಂಸಿಸಿದ ಮಾಂತ್ರಿಕಳನ್ನು ಪೊಲೀಸರು ಬಂಧಿಸಿದ್ದಾರೆ.

ವಾಸಾಯಿ ಪಟ್ಟಣದ ನಿರ್ಮಲ್ ಗ್ರಾಮದ ನಿವಾಸಿಯಾದ ಜಿತೇಶ್ ಘೋಷೆ ಎನ್ನುವ ವ್ಯಕ್ತಿಯೊಬ್ಬ, ಮಾಂತ್ರಿಕಳಾಗಿದ್ದ ದರ್ಶನಾ ಜಾಧವ್ ಎನ್ನುವ ಮಹಿಳೆಯನ್ನು ಭೇಟಿ ಮಾಡಿ ಮಂತ್ರ ಶಕ್ತಿಯಿಂದ ತಂದೆಯ ಆತ್ಮದೊಂದಿಗೆ ಸಂವಾದ ನಡೆಸಲು ನೆರವಾಗುವಂತೆ ಕೋರಿದಾಗ ನೆರವು ನೀಡಲು ಒಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂತ್ರಿಕ ಮಹಿಳೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರಸಿ ಜಿತೇಶ್ ಘೋಷ್‌ಗೆ ನೀಡಿದ್ದಾಳೆ ನಿದ್ರೆ ಮಂಪರಿನಲ್ಲಿದ್ದಾಗ ಆತನ ದೇಹದ ಮೇಲೆ ಕುದಿಯುವ ಎಣ್ಣೆ ಹಾಕಿ ಹತ್ತಿಯಿಂದ ಒತ್ತಿದ್ದರಿಂದ ಸುಟ್ಟಗಾಯಗಳಾಗಿವೆ. ನಿದ್ರೆಯಿಂದ ಎಚ್ಚತ್ತ ಜಿತೇಶ್ ತನ್ನ ದೇಹದ ಮೇಲಾದ ಸುಟ್ಟಗಾಯಗಳಿಂದ ಗಾಬರಿಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪೊಲೀಸರು ನಾಪತ್ತೆಯಾಗಿರುವ ಆರೋಪಿ ಮಹಿಳೆ ದರ್ಶನಾ ಜಾಧವ್ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments