ಸಂಸದರು, ಶಾಸಕರ ಹಗರಣಗಳ ವಿಚಾರಣೆಗಳನ್ನು ಒಂದೇ ವರ್ಷದಲ್ಲಿ ಪೂರ್ತಿಗೊಳಿಸಿ: ಸುಪ್ರೀಂ ಆದೇಶ
ನವದೆಹಲಿ , ಸೋಮವಾರ, 10 ಮಾರ್ಚ್ 2014 (12:58 IST)
ಸಂಸದರು, ಶಾಸಕರ ಹಗರಣಗಳ ವಿಚಾರಣೆಗಳನ್ನು ಒಂದೇ ವರ್ಷದಲ್ಲಿ ಪೂರ್ತಿಗೊಳಿಸಿ ಎಂದು ಸುಪ್ರೀಂಕೋರ್ಟ್ ಆಧೀನ ನ್ಯಾಯಾಲಯಗಳಿಗೆ ಆದೇಶಿಸಿದೆ.ರಾಜಕಾರಣಿಗಳ ಪ್ರಕರಣಗಳ ವಿಚಾರಣೆಯಲ್ಲಿ ಅನಗತ್ಯವಾಗಿ ವಿಳಂಬವಾಗುತ್ತಿರುವುದರಿಂದ ಅಸಮಾಧಾನಗೊಂಡ ಸುಪ್ರೀಂಕೋರ್ಟ್ ಇದೀಗ ಕಟ್ಟಾಜ್ಞೆ ಹೊರಡಿಸಿದೆ.ನ್ಯಾಯಾಲಯಗಳಲ್ಲಿನ ವಿಳಂಬ ವಿಚಾರಣೆಯಿಂದಾಗಿ ಆರೋಪಿಗಳು ಲಾಭ ಪಡೆಯುತ್ತಿರುವುದರಿಂದ ಕಕ್ಷಿದಾರರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ.