Webdunia - Bharat's app for daily news and videos

Install App

ಶುಭ ಮುಹೂರ್ತದಲ್ಲಿ ವರುಣ್ ಗಾಂಧಿ- ಯಾಮಿನಿ ವಿವಾಹ

Webdunia
ಸೋಮವಾರ, 7 ಮಾರ್ಚ್ 2011 (13:29 IST)
PTI
ಗಾಂಧಿ -ನೆಹರು ಕುಟುಂಬದ ಕುಡಿ ಹಾಗೂ ಬಿಜೆಪಿ ಸಂಸದ ಯುವನಾಯಕ ವರುಣ್ ಗಾಂಧಿ ಇಂದು ಯಾಮಿನಿ ರಾಯ್ ಚೌಧರಿಯವರೊಂದಿಗೆ ಕಂಚಿ ಕಾಮಕೋಟಿ ಮಂದಿರದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾದರು.

ಇಂದು ಬೆಳಿಗ್ಗೆ 8ಗಂಟೆ 30 ನಿಮಿಷಕ್ಕೆ ಶುಭ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು. ವಿವಾಹದ ನಂತರ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ನವದಂಪತಿಗಳಿಗೆ ಆಶೀರ್ವದಿಸಿದರು.

ಮದುವೆ ಸಮಾರಂಭದಲ್ಲಿ ವರುಣ್ ತಂಗಿ ಪ್ರಿಯಾಂಕಾ ಗಾಂಧಿ ಆಗಮಿಸುವ ವದಂತಿಗಳಿದ್ದವು. ಆದರೆ, ಸೋನಿಯಾ ,ರಾಹುಲ್, ಪ್ರಿಯಾಂಕಾ ಗಾಂಧಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ನೆಹರು -ಗಾಂಧಿ ಪರಿವಾರದಲ್ಲಿ ದಿವಂಗತ ಇಂದಿರಾ ಗಾಂಧಿ ತಾಯಿಯಾದ ಕಮಲಾ ಕೌಲ್ ನಂತರ ಮೊದಲ ಬಾರಿಗೆ ಬ್ರಾಹ್ಮಣ ಕುಟುಂಬದೊಂದಿಗೆ ವಿವಾಹ ನಡೆಯುತ್ತಿದೆ. ವರುಣ್ ಪತ್ನಿ ಯಾಮಿನಿ ಬಂಗಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಸೋನಿಯಾ ಮತ್ತು ಮೇನಕಾ ನಂತರ ಯಾಮಿನಿ ಪ್ರತಿಷ್ಠಿತ ಕುಟುಂಬದ ಮೂರನೇ ಸೊಸೆಯಾಗಿದ್ದಾರೆ. ವರುಣ್ ಮತ್ತು ಯಾಮಿನಿ 2004ರಿಂದ ಗೆಳೆತನವನ್ನು ಹೊಂದಿದ್ದು, ಇದೀಗ ನವದಂಪತಿಗಳಾಗಿದ್ದಾರೆ.

ಸುಷ್ಮಾ ಸ್ವರಾಜ್ ಟ್ವಿಟ್ಟರ್‌ನಲ್ಲಿ ವರುಣ್ ಗಾಂಧಿಯವರಿಗೆ ವಿವಾಹದ ಶುಭಾಶಯಗಳನ್ನು ಕೋರಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

Show comments