Select Your Language

Notifications

webdunia
webdunia
webdunia
webdunia

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್
, ಶುಕ್ರವಾರ, 11 ಏಪ್ರಿಲ್ 2014 (09:34 IST)
PR
ಸಾವನ್ನು ಎದುರಿಸಿ ಮತ್ತೆ ಬದುಕಿಗೊಂದು ಹೊಸ ಅರ್ಥ ಕಲ್ಪಿಸುವ ಮತ್ತು ಇತರರಿಗೆ ಮಾದರಿ ಆಗುವ ವ್ಯಕ್ತಿತ್ವಗಳ ಬಗ್ಗೆ ಜಗತೀಗೆ ವಿಶೇಷವಾದ ಗೌರವ ಇದ್ದೆ ಇರುತ್ತದೆ. ಮನಿಷ ಕೊಯಿರಾಲ ಬಾಲಿವುಡ್ ಆಳಿದ ನೇಪಾಳಿ ಚೆಲುವೆ. ಅನೇಕ ಉತ್ತಮ ಚಿತ್ರಗಳನ್ನು ನೀಡಿದ ಈ ಚೆಲುವೆ ಬಾಲಿವುಡ್ ನಂತರ ತನ್ನ ಬದುಕನ್ನು ವೈವಾಹಿಕ ಜೀವನದತ್ತ ನಡೆಸಿದರು.

ಆದರೆ ಅದು ಹೇಳಿಕೊಳ್ಳುವಂತಹ ಯಶ ಕಾಣಲಿಲ್ಲ. ಇಷ್ಟೇ ದುಃಖದ ಸಂಗತಿ ಆಗಿದ್ದಿದ್ದರೆ ಏನೋ ಇಷ್ಟೇ ತಾನೇ ಅಂತ ಆಕೆ ಇರ ಬಹುದಿತ್ತು, ಆದರೆ ಮನಿಷ ಬದುಕಲ್ಲಿ ಬಿರುಗಾಳಿಯಾಗಿ ಬಂದ ಸಂಗತಿ ಎಂದರೆ ಕ್ಯಾನ್ಸರ್ ಕಾಯಿಲೆ. ಓವರಿನ್ ಕ್ಯಾನ್ಸರ್ಗೆ ತುತ್ತಾದ ಮನಿಷ ಹೆಚ್ಚಿನ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ಹೋದರು. ಅದು ಎರಡು ವರ್ಷಗಳ ಹಿಂದಿನ ಕಥ್ಹೆ.ಈಗ ಆ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

Share this Story:

Follow Webdunia kannada