Webdunia - Bharat's app for daily news and videos

Install App

ವಾದಕ್ಕೆ ಸಿದ್ಧವಾಗಿರುವ ಕಸಬ್‌ನ ಹೊಸ ಲಾಯರ್ ಪವಾರ್

Webdunia
ಮಂಗಳವಾರ, 1 ಡಿಸೆಂಬರ್ 2009 (16:43 IST)
ಮುಂಬೈದಾಳಿ ಪ್ರಕರಣದ ಪ್ರಮುಖ ಆರೋಪಿ ಅಜ್ಮಲ್ ಅಮೀರ್ ಕಸಬ್ ಪರ ವಕೀಲ ಅಬ್ಬಾಸ್ ಖಾಜ್ಮಿ ವಜಾಗೊಂಡಿರುವ ಬಳಿಕ ಇದೀಗ ಅವರ ಸಹಾಯಕರಾಗಿದ್ದ ಕೆಪಿ ಪವಾರ್ ಅವರನ್ನು 26/11 ಪ್ರಕರಣದ ಪ್ರಮುಖ ವಕೀಲರನ್ನಾಗಿಸಲಾಗಿದ್ದು, ಅವರು ಪ್ರಕರಣವನ್ನು ಮುನ್ನಡೆಸಲು ಸಂಪೂರ್ಣ ಸನ್ನದ್ಧರಾಗಿದ್ದಾರೆ.

" ತನಗೆ ವಹಿಸಲಾಗಿರುವ ಜವಾಬ್ದಾರಿಯನ್ನು ತಾನು ಉತ್ಸಾಹದಿಂದ ನಿರ್ವಹಿಸುವೆ. ಕಸಬ್‌ನ ವಕೀಲನನ್ನಾಗಿ ನೇಮಿಸುವ ಮೂಲಕ ನ್ಯಾಯಾಲಯವು ತನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ತಾನು ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವೆ" ಎಂಬುದಾಗಿ 55ರ ಹರೆಯದ ವಕೀಲ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಸಬ್‌ನನ್ನು ಸಮರ್ಥಿಸಿಕೊಳ್ಳಲು ನಿಮ್ಮ ವ್ಯೂಹಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಾನೀಗ ಪ್ರಕರಣದ ಕುರಿತು ತಯಾರಿ ನಡೆಸುತ್ತಿರುವ ಕಾರಣ ಈ ವಿಚಾರವನ್ನು ಹೊರಗೆಡವಲಾರೆ ಎಂದು ಹೇಳಿದ್ದಾರೆ.

ಪವಾರ್ ಅವರಿಗೆ ಕ್ರಿಮಿನಲ್ ಲಾಯರ್ ಆಗಿ 15 ವರ್ಷಗಳ ಅನುಭವ ಇದೆ. ಅವರು 1992ರ ಕೋಮುಗಲಭೆ ಪ್ರಕರಣದಲ್ಲಿ ಡಿಫೆನ್ಸ್ ವಕೀಲರಾಗಿ ಕಾರ್ಯಕೈಗೊಂಡಿದ್ದರು. ಇದರ ಒಂದು ಪ್ರಕರಣದಲ್ಲಿ 40 ಮಂದಿಯನ್ನು ಖುಲಾಸೆಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಇನ್ನೊಂದು ಇಂತಹುದೇ ಪ್ರಕರಣದಲ್ಲಿ 20 ಮಂದಿಯ ಬಿಡುಗಡೆಯಾಗಿತ್ತು.

ಕಾನೂನು ವೃತ್ತಿಗೆ ಕಾಲಿಡುವ ಮುನ್ನ ಅವರು ಮುನ್ಸಿಪಲ್ ಅಧಿಕಾರಿಯಾಗಿದ್ದರು. ವಕೀಲರಾಗಿ ಕಾರ್ಯನಿರ್ವಹಿಸುವುದು ತನಗೆ ಉದ್ಯೋಗ ತೃಪ್ತಿ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಖಾಜ್ಮಿ ಸಮರ್ಥನೆ
ಈ ಮಧ್ಯೆ ಕಸಬ್ ವಕೀಲರಾಗಿದ್ದ ಅಬ್ಬಾಸ್ ಖಾಜ್ಮಿ ತನ್ನ ಮೇಲಿನ ಅಸಕಾರದ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ತನ್ನ ನಡೆಯನ್ನು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿರುವ ಅವರು ತನ್ನನ್ನು ವಜಾಗೊಳಿಸಿರುವುದರ ವಿರುದ್ಧ ಕಾನೂನು ಸಮರ ಹೂಡುವುದಾಗಿ ಹೇಳಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

Show comments