Select Your Language

Notifications

webdunia
webdunia
webdunia
webdunia

ವಕೀಲರು ಗೂಂಡಾಗಳಂತೆ ವರ್ತಿಸಿದರು: ವರದಿ

ವಕೀಲರು ಗೂಂಡಾಗಳಂತೆ ವರ್ತಿಸಿದರು: ವರದಿ
ನವದೆಹಲಿ , ಶುಕ್ರವಾರ, 6 ಮಾರ್ಚ್ 2009 (20:35 IST)
ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರು ಮದ್ರಾಸ್ ಹೈಕೋರ್ಟಿನಲ್ಲಿನ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆ ಕುರಿತು ಸಲ್ಲಿಸಿರುವ ವರದಿಯಲ್ಲಿ ವಕೀಲರು ಗೂಂಡಾಗಳಂತೆ ವರ್ತಿಸಿದರು ಎಂದು ಹೇಳಿದ್ದಾರೆ.

ಗುರುವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ, ಫೆ.19ರ ಘರ್ಷಣೆಗೆ ಪೊಲೀಸ್ ಹಾಗೂ ವಕೀಲರಿಬ್ಬರನ್ನೂ ದೂಷಿಸಿದ್ದು, ನ್ಯಾಯಾಲಯದ ಆಸ್ತಿಗೆ ಹಾನಿ ಮಾಡಿರುವುದಕ್ಕೆ ಅಸಮಾಧಾನ ಸೂಚಿಸಿದ್ದಾರೆ.

ವಕೀಲರ ವಿರುದ್ಧ ಲಾಠಿಪ್ರಹಾರ ಮಾಡಿರುವ ಕ್ರಮವನ್ನೂ ಅವರು ಟೀಕಿಸಿದ್ದಾರೆ. ಅದಾಗ್ಯೂ ಅವರು ನ್ಯಾಯಾಂಗ ತನಿಖೆಯನ್ನು ಮುಂದುವರಿಸಲು ಅಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದು, ತನ್ನ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Share this Story:

Follow Webdunia kannada