Webdunia - Bharat's app for daily news and videos

Install App

ಲಾಟರಿ ಹಗರಣ: ಚಿದಂಬರಂಗೆ ಹೈಕೋರ್ಟ್ ನೋಟೀಸ್

Webdunia
ಬುಧವಾರ, 9 ಮಾರ್ಚ್ 2011 (12:29 IST)
WD
ನರೇಂದ್ರ ಮೋದಿಗೆ, ಆಡ್ವಾಣಿಗೆ, ವರುಣ್ ಗಾಂಧಿಗೆ ಮತ್ತಿತರರಿಗೆ ನ್ಯಾಯಾಲಯವು ನೋಟೀಸ್ ನೀಡಿರುವುದನ್ನೂ, ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿರುವುದನ್ನೂ ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಕಷ್ಟು ಕಂಡಿದ್ದೇವೆ, ಕೇಳಿದ್ದೇವೆ. ಕೇಂದ್ರ ಗೃಹ ಸಚಿವರಿಗೇ ಕೇರಳ ಹೈಕೋರ್ಟ್ ನೋಟೀಸ್ ನೀಡಿರುವ ಪ್ರಕರಣ ಅಪರೂಪದ್ದು.

ಭೂತಾನ ಸರಕಾರ ಮತ್ತು ಸಿಕ್ಕಿಂ ರಾಜ್ಯಗಳಿಂದ ಭಾರತದಾದ್ಯಂತ ವಿತರಿಸಲಾದ ಲಾಟರಿಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ, ಈ ಲಾಟರಿಯ ಪ್ರೋತ್ಸಾಹಕರ ಪರವಾಗಿ ವಕಾಲತ್ತು ಮಾಡುತ್ತಿದ್ದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಕೇಂದ್ರ ಸರಕಾರ, ಸಿಬಿಐ ಮತ್ತು ಕೇರಳ ರಾಜ್ಯ ಸರಕಾರಗಳಿಗೆ ಹೈಕೋರ್ಟ್‌ನ ಕೊಚ್ಚಿ ಪೀಠವು ನೋಟೀಸ್ ಜಾರಿಗೊಳಿಸಿದೆ.

ಸಿಕ್ಕಿಂ ಮತ್ತು ಭೂತಾನ ಲಾಟರಿಗಳು 1998ರಿಂದೀಚೆಗೆ ಪ್ರೊಮೋಟರ್‌ಗಳ ಮೂಲಕ ದೇಶಾದ್ಯಂತ ಮುದ್ರಣಗೊಂಡು ಮಾರಾಟವಾಗುತ್ತಿದ್ದು, ಸಿಕ್ಕಿಂ ಮತ್ತು ಭೂತಾನ ಸರಕಾರಗಳಿಗೆ ಈ ವಿಷಯವೇ ಗೊತ್ತಿರಲಿಲ್ಲ ಮತ್ತು ಅವುಗಳ ಸಮ್ಮತಿಯೂ ಇರಲಿಲ್ಲ. ಈ ಲಾಟರಿಗಳು ಅಸಲಿಯಲ್ಲ ಮತ್ತು ಖೋಟಾ ಎಂದು ತಿಳಿದಿದ್ದೇ ಅವುಗಳನ್ನು ಮಾರಲಾಗುತ್ತಿತ್ತು ಎಂದು ಅರ್ಜಿದಾರ ಕೆ.ಎಂ.ಶಿವನ್‌ಕುಟ್ಟಿ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು.

ಚಿದಂಬರಂ ಅವರು ಫೋರ್ಜರಿ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿರುವ ಈ ಲಾಟರಿಯ ಪ್ರೊಮೋಟರ್‌ಗಳ ಪರವಾಗಿ ಹಿಂದೆ ವಕಾಲತ್ತು ನಡೆಸಿದ್ದರು. ಇದಲ್ಲದೆ, ಅವರು ಜನಸೇವಕನಾಗಿ ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಪ್ರೊಮೋಟರ್‌ಗಳಿಗೆ ಹಣಕಾಸಿನ ಲಾಭ ದೊರಕಿಸಿಕೊಟ್ಟಿದ್ದಾರೆ ಮತ್ತು ಈ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೇರಳದ ಲಾಟರಿ ಹಗರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೇರಳದ ಎಡರಂಗದ ಮುಖ್ಯಮಂತ್ರಿ, ವಿ.ಎಸ್.ಅಚ್ಯುತಾನಂದನ್ ಅವರು ಹಲವಾರು ಬಾರಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೇಂದ್ರದ ನಿಲುವೇನು ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ನಿಗದಿಪಡಿಸಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Show comments