Webdunia - Bharat's app for daily news and videos

Install App

ರೈಲುಗಳ ಬಹಿಷ್ಕಾರಕ್ಕೆ ಪ್ರಯಾಣಿಕರ ನಿರ್ಧಾರ

Webdunia
ಸೋಮವಾರ, 10 ಡಿಸೆಂಬರ್ 2007 (15:06 IST)
ಒಂದು ನಿರ್ದಿಷ್ಟ ಮಾರ್ಗದಲ್ಲಿ ಅಸಮರ್ಪಕ ರೈಲು ಸಂಚಾರದ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಪಶ್ಚಿಮ ರೈಲ್ವೆಯ ಸಬರ್ಬನ್ ಮಾರ್ಗದಲ್ಲಿ ರೈಲುಗಳಿಗೆ ಬಹಿಷ್ಕಾರ ಹಾಕಲು ನೂರಾರು ಪ್ರಯಾಣಿಕರು ಸೋಮವಾರ ನಿರ್ಧರಿಸಿದರು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಪ್ರವಾಸಿ ಅಧಿಕಾರ್ ಆಂದೋಳನ ಸಮಿತಿ ಈ ಬಹಿಷ್ಕಾರಕ್ಕೆ ಕರೆ ನೀಡಿದೆ.

ದಕ್ಷಿಣ ಮುಂಬೈನ ಚರ್ಚ್‌ಗೇಟ್ ಮತ್ತು ಸಬರ್ಬನ್ ವಿರಾರ್ ನಡುವೆ ಇನ್ನಷ್ಟು ರೈಲುಗಳನ್ನು ಓಡಿಸುವಂತೆ ಈ ಸಮಿತಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದೆ.ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದ್ದು, ರೈಲುಗಳಿಗೆ ತಡೆಯೊಡ್ಡುವ ಅಥವಾ ಪ್ರಯಾಣಕ್ಕೆ ತಡೆಯೊಡ್ಡುವುದಿಲ್ಲ ಎಂದು ಪಾಸ್ ಸಂಚಾಲಕ ಶೈಲೇಂದ್ರ ಕಾಂಬ್ಲೆ ತಿಳಿಸಿದರು.

ಪ್ರಯಾಣಿಕರು ಎದುರಿಸುತ್ತಿರುವ ಅಮಾನವೀಯ ಸ್ಥಿತಿಗತಿಗಳ ವಿರುದ್ಧ ಪ್ರತಿಭಟಿಸಲು ಮೀರಾ ರಸ್ತೆ ಮತ್ತು ವಿರಾರ್ ನಿಲ್ದಾಣಗಳ ನಡುವೆ ಘೋಷಣೆ ಕೂಗುವುದು ಮತ್ತು ಪಿಕೆಟಿಂಗ್ ನಡೆಸುವ ಮೂಲಕ ಈ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಅವರು ನುಡಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

Show comments