Webdunia - Bharat's app for daily news and videos

Install App

ರೇಪ್ ಪ್ರಕರಣ ದಾಖಲಿಸಲು ಬಂದ ಬಾಲಕಿಗೆ ಬಟ್ಟೆ ಬಿಚ್ಚು ಎಂದು ಪೊಲೀಸ್ ಅಧಿಕಾರಿ

Webdunia
ಸೋಮವಾರ, 31 ಮಾರ್ಚ್ 2014 (16:26 IST)
ಅತ್ಯಾಚಾರ ಪ್ರಕರಣ ದಾಖಲಿಸಲು ಬಂದ 14 ವರ್ಷ ವಯಸ್ಸಿನ ಬಾಲಕಿಗೆ ನಗ್ನಳಾಗುವಂತೆ ಹಿರಿಯ ಪೊಲೀಸ್ ಅಧಿಕಾರಿ ಒತ್ತಾಯಿಸಿದ ಹೇಯ ಘಟನೆ ಉತ್ತರಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ನಡೆದಿದೆ

ಸ್ಥಳೀಯ ನಿವಾಸಿಯೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತನ್ನ ತಂದೆ ತಾಯಿಯೊಂದಿಗೆ ಬಾಲಕಿ ತೆರಳಿದ್ದಳು.ಅತ್ಯಾಚಾರವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬಟ್ಟೆಗಳನ್ನು ಕಳಚಿಹಾಕುವಂತೆ ಠಾಣೆಯ ಅಧಿಕಾರಿ ಜೈಸ್ ರಾಜ್ ಯಾದವ್ ಒತ್ತಾಯಪಡಿಸಿದ್ದಾನೆ.

ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಕೋಣೆಯೊಂದಕ್ಕೆ ತೆಗೆದುಕೊಂಡು ಹೋಗಿ ಬಾಗಿಲು ಮುಚ್ಚಿ ಬಟ್ಟೆ ಬಿಚ್ಚುವಂತೆ ಗದರಿದ್ದಾನೆ. ಬಾಲಕಿಯ ನಗ್ನದೇಹದ ಮೇಲೆ ತನ್ನ ಕ್ರೌರ್ಯವನ್ನು ಮೆರೆದಿದ್ದಾನೆ.

ಪೊಲೀಸ್ ಠಾಣೆಯ ಅಧಿಕಾರಿಯ ವರ್ತನೆಯಿಂದ ನೊಂದ ಕುಟುಂಬ ರೇಪ್ ಪ್ರಕರಣ ದಾಖಲಿಸದೆ ವಾಪಸ್ಸಾಗಿದೆ.ನಂತರ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದಾಗ ಕೊನೆಗೂ ರೇಪ್ ಪ್ರಕರಣ ದಾಖಲಿಸಿ ಆರೋಪಿಯನ್ನು ಕೂಡಾ ಬಂಧಿಸಲಾಗಿದೆ

ಆರೋಪಿ ಪೊಲೀಸ್ ಅಧಿಕಾರಿ ಜೈಸ್ ರಾಜ್ ಯಾದವ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments