Select Your Language

Notifications

webdunia
webdunia
webdunia
webdunia

ರಾಹುಲ್ ಹೇಳಿಕೆಯಿಂದ ಬಿಜೆಪಿಯ ಬಲೂನ್ ಪಂಕ್ಚರ್: ದಿಗ್ವಿಜಯ್ ಸಿಂಗ್

ರಾಹುಲ್ ಹೇಳಿಕೆಯಿಂದ ಬಿಜೆಪಿಯ ಬಲೂನ್ ಪಂಕ್ಚರ್: ದಿಗ್ವಿಜಯ್ ಸಿಂಗ್
ನವದೆಹಲಿ , ಶನಿವಾರ, 28 ಸೆಪ್ಟಂಬರ್ 2013 (15:48 IST)
PTI
ಕಳಂಕಿತ ರಾಜಕಾರಣಿಗಳ ರಕ್ಷಣೆಯ ಸುಗ್ರೀವಾಜ್ಞೆ ವಿರುದ್ಧ ರಾಹುಲ್ ಹೇಳಿಕೆಯಿಂದಾಗಿ ಬಿಜೆಪಿಯ ದಂದ್ವ ಹೇಳಿಕೆಯ ಬಲೂನ್ ಟುಸ್ ಎಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇದೀಗ ಕಳಂಕಿತ ರಾಜಕಾರಣಿಗಳ ಸಂರಕ್ಷಣೆ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳು, ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದವು ಎಂದು ಲೇವಡಿ ಮಾಡಿದ್ದಾರೆ.

ಕಳೆದ ಶುಕ್ರವಾರದಂದು ಇಂತಹ ಸುಗ್ರೀವಾಜ್ಞೆಯನ್ನು ಕಸದ ಬುಟ್ಟಿಗೆ ಹರಿದು ಬಿಸಾಕಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿಪಕ್ಷಗಳಲ್ಲಿ ಕೋಲಾಹಲ ಸೃಷ್ಟಿಸಿವೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಅನುಮತಿ ನಂತರ ರಾಷ್ಟ್ರಪತಿಗೆ ಕಳುಹಿಸಲಾದ ಸುಗ್ರೀವಾಜ್ಞೆಯನ್ನು ದಿಗ್ವಿಜಯ್ ಸಿಂಗ್ ನಿನ್ನೆ ವಿರೋಧಿಸಿದ್ದರು.

Share this Story:

Follow Webdunia kannada